ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಯಿಲಿಲ್ಲದವನ ಉಸಾಬರಿ…

– ನರೇಶ್ ಮಯ್ಯ

ಹೀಗೆ ಹತ್ತು ಹದಿನಾರು ಮುಂಗಾರು ಮುಗಿದುಹೋಗಿದ್ದವು

ನಿನ್ನ ಮಜ್ಜನದಲ್ಲಿ.

ಮಸಣದಿಂದೆದ್ದು ಬಂದ ಆ ಘಮಲು

ನಿನ್ನ ಮುಡಿ ಮುಟ್ಟಿ

ಮಟ ಮಟ ಮಧ್ಯಾಹ್ನವೇ ಮಾಡಿಹೋಗಿತ್ತು ಮಾಟ.

ಮಾತಿಗೂಮೀರಿದದಾವುದೋ

ಒಂದು ನಿವರ್ಿಣ್ಣ ಭಾವ

ಮಿಣುಕು ಮಿಂಚುಳ್ಳಿಗಳ

ಆಲಾಪಲೋಲುಪದಲ್ಲಿ ಲೀನವಾದಾಗ

ಅದೋ. . . .

ನೀಳ ನಿಚ್ಚಳವಾಗುತ್ತಾ ಬಂದಿತ್ತು

ಗೊಮ್ಮಟನ ಗೋರಿ.

 

ದೈದೀಪ್ಯಮಾನವಾಗಿ ನಿಂತಿದ್ದೇ

ನಿನ್ನ ನಡೆಯೇ ?

ನೀನರುಹಿದ ದಾರಿಯೇ ?

ಇಹಕೂ ಸಲ್ಲಲಿಲ್ಲ, ಪರಕೂ ಸಲ್ಲಲಿಲ್ಲ

ನಿನ್ನಾತ್ಮ;

ಆ ಆತ್ಮಹೀನ ಸ್ಥಿತಿಯ ಸದ್ಗತಿ

ನನಗೂ ಒಂದಿಷ್ಟು ಪಾಲಿಸಯ್ಯ.

 

ಮಸ್ತಕಕಷ್ಟೇ ಅಭಿಷೇಕ

ನಿನ್ನ ಕುಮ್ಮಣ್ಣಿಗಲ್ಲ.

ಏಳಲಿ ಬಿಡು ಒಮ್ಮೆ,

ಎದ್ದೊದೆಯಲಿ ಜಗದಂಗಳವ

ಹಾಡಲಿ ಮಂಗಳವ.

 

ಮಂಗಣ್ಣನೂ ನಿರಾಭರಣ ಸುಂದರನಲ್ಲವೇ

ನಿನ್ನಂತೆ ?

ಅರುಹಿಹೋಗಿಲ್ಲವೇ ಅವಗೆ

ನಿನ್ನ ಥಿಯರಿಯ ?

 

ಪ್ರತಿ ಹನ್ನೆರಡು ವರ್ಷಕ್ಕೆ ನೀಗಿ

ಮತ್ತೆ ಹುಟ್ಟುತ್ತೀಯೆ

ಲೋಕದಿಚ್ಛೆಯಂತೆ.

. . . . ನೀ ಬರೆದ ಉಯಿಲದೆಲ್ಲಿ. . ?

. . . .

 

ಈ ಬಾರಿಯೂ

ನಿನ್ನದೊಂದು ಭರ್ಜರಿ ಬಲಿ

ಬಾಹುಬಲಿ

photo courtesy -niki shredder

‍ಲೇಖಕರು avadhi

23 November, 2011

1 Comment

  1. Akshatha Udupa

    Nice one!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading