ಯೋಗೇಶ್ ಎಚ್ ವಿ
ಗುಜರಾತಿನಲ್ಲಿ ಮುಸ್ಲಿಮರ ಮಾರಣ ಹೋಮ ನಡೆದಿತ್ತು, ಅದನ್ನು ಪ್ರತಿಭಟಿಸಿ ‘ಅಗ್ನಿ’ ಪತ್ರಿಕೆ ಕಾರ್ಯಕ್ರಮ ಹಮ್ಮಿಕೊಂಡಿತ್ತು
ಆಗ ನಾನು ಅಲ್ಲಿಗೆ ಭಾಗವಹಿಸಲು ಹೋಗಿದ್ದೆ . ಅಲ್ಲೇ ನೋಡಿದ್ದು ಈ ರೈತ ಮುಖಂಡರಾದ ಪುಟ್ಟಣ್ಣಯ್ಯ ಅವರನ್ನು .
ಪುಟ್ಟಣ್ಣಯ್ಯನವರು “ನೋಡಿ , ನೀವು ಮಸೀದಿ ಕಟ್ಟಿದ್ರೆ ಮುಸ್ಲಿಂ ಮಾತ್ರ ಅಲ್ಲಿಗೆ ಹೋಗ್ತಾರೆ, ದೇವಸ್ಥಾನ ಕಟ್ಟಿದರೆ ಹಿಂದೂಗಳು ಮಾತ್ರ ಹೋಗ್ತಾರೆ, ಚರ್ಚ್ ಕಟ್ಟಿದರೆ ಕ್ರಿಶ್ಚಿಯನ್ ಮಾತ್ರ ಹೋಗ್ತಾರೆ .. ಬ್ಯಾಡ.. ಅದೇ ನೀವು ಕಕ್ಕಸ್ ಮನೆ ಕಟ್ಟಿ ಈ ಹಿಂದೂ , ಮುಸ್ಲಿಂ , ಕ್ರಿಶ್ಚಿಯನ್ ಎಲ್ಲರೂ ಚೆಂಬು ಇಟ್ಕೊಂಡು ಲೈನುಕ್ಕೆ ಒಟ್ಟಿಗೆ ನಿಂತ್ಕೋತಾರೆ ….
ನೋಡ್ರೀ ನಾವು ರೈತಾಪಿ ಜನ ನಾವು ಭೂಮಿ ತಾಯಿ ಮಕ್ಕಳು, ನಮ್ಮ ಧರ್ಮ ಭೂಮಿ, ಈ ತಾಯಿ ಎಲ್ಲರನ್ನೂ ಹೊತ್ತು ಸಾಕ್ತಾಳೆ ..ನಾವು ಸತ್ರೆ ತನ್ನ ಮಡಿಲಲ್ಲೇ ಇಟ್ಕೊತಾಳೆ, ಯಾವತ್ತೂ ನಮ್ಮ ಕೈ ಬಿಡಾಕಿಲ್ಲ..ಎಲ್ಲಾ ಭೂತಾಯಿ ಮಕ್ಕಳಾಗಿ..”
ಕಂಚಿನ ಕಂಠದ ಪುಟ್ಟಣ್ಣಯ್ಯನವರು, ಪರಿಣಾಮಕಾರಿಯಾಗಿ, ಸರಳವಾಗಿ ಮಾತಾಡುತ್ತಿದ್ದ ರೈತ ಮುಖಂಡ ಇನ್ನಿಲ್ಲ ಎನ್ನುವುದು ನಿಜಕ್ಕೂ ದುಃಖಕರ ವಿಷಯ
0 ಪ್ರತಿಕ್ರಿಯೆಗಳು