ಈ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಚೆಂಬು ಇಟ್ಕೊಂಡು ಲೈನುಕ್ಕೆ ಒಟ್ಟಿಗೆ ನಿಂತ್ಕೋತಾರೆ ..

ಯೋಗೇಶ್ ಎಚ್ ವಿ 

ಗುಜರಾತಿನಲ್ಲಿ ಮುಸ್ಲಿಮರ ಮಾರಣ ಹೋಮ ನಡೆದಿತ್ತು, ಅದನ್ನು ಪ್ರತಿಭಟಿಸಿ ‘ಅಗ್ನಿ’ ಪತ್ರಿಕೆ ಕಾರ್ಯಕ್ರಮ ಹಮ್ಮಿಕೊಂಡಿತ್ತು

ಆಗ ನಾನು ಅಲ್ಲಿಗೆ ಭಾಗವಹಿಸಲು ಹೋಗಿದ್ದೆ . ಅಲ್ಲೇ ನೋಡಿದ್ದು ಈ ರೈತ ಮುಖಂಡರಾದ ಪುಟ್ಟಣ್ಣಯ್ಯ ಅವರನ್ನು .

ಪುಟ್ಟಣ್ಣಯ್ಯನವರು “ನೋಡಿ , ನೀವು ಮಸೀದಿ ಕಟ್ಟಿದ್ರೆ ಮುಸ್ಲಿಂ ಮಾತ್ರ ಅಲ್ಲಿಗೆ ಹೋಗ್ತಾರೆ, ದೇವಸ್ಥಾನ ಕಟ್ಟಿದರೆ ಹಿಂದೂಗಳು ಮಾತ್ರ ಹೋಗ್ತಾರೆ, ಚರ್ಚ್ ಕಟ್ಟಿದರೆ ಕ್ರಿಶ್ಚಿಯನ್ ಮಾತ್ರ ಹೋಗ್ತಾರೆ .. ಬ್ಯಾಡ.. ಅದೇ ನೀವು ಕಕ್ಕಸ್ ಮನೆ ಕಟ್ಟಿ ಈ ಹಿಂದೂ , ಮುಸ್ಲಿಂ , ಕ್ರಿಶ್ಚಿಯನ್ ಎಲ್ಲರೂ ಚೆಂಬು ಇಟ್ಕೊಂಡು ಲೈನುಕ್ಕೆ ಒಟ್ಟಿಗೆ ನಿಂತ್ಕೋತಾರೆ ….

ನೋಡ್ರೀ ನಾವು ರೈತಾಪಿ ಜನ ನಾವು ಭೂಮಿ ತಾಯಿ ಮಕ್ಕಳು, ನಮ್ಮ ಧರ್ಮ ಭೂಮಿ, ಈ ತಾಯಿ ಎಲ್ಲರನ್ನೂ ಹೊತ್ತು ಸಾಕ್ತಾಳೆ ..ನಾವು ಸತ್ರೆ ತನ್ನ ಮಡಿಲಲ್ಲೇ ಇಟ್ಕೊತಾಳೆ, ಯಾವತ್ತೂ ನಮ್ಮ ಕೈ ಬಿಡಾಕಿಲ್ಲ..ಎಲ್ಲಾ ಭೂತಾಯಿ ಮಕ್ಕಳಾಗಿ..”

ಕಂಚಿನ ಕಂಠದ ಪುಟ್ಟಣ್ಣಯ್ಯನವರು, ಪರಿಣಾಮಕಾರಿಯಾಗಿ, ಸರಳವಾಗಿ ಮಾತಾಡುತ್ತಿದ್ದ ರೈತ ಮುಖಂಡ ಇನ್ನಿಲ್ಲ ಎನ್ನುವುದು ನಿಜಕ್ಕೂ ದುಃಖಕರ ವಿಷಯ

‍ಲೇಖಕರು avadhi

February 21, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: