ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಶನಿವಾರ ಸುಚಿತ್ರದಲ್ಲಿ ‘ಗಗ್ಗರ’

ಗಗ್ಗರ (ತುಳು)

(110ನಿಮಿಷ/2008)

ಕಥಾ ಸಾರಾಂಶ

ಭೂತಕೋಲ ಕರಾವಳಿ ಕನರ್ಾಟಕದಲ್ಲಿ ರೂಢಿಯಲ್ಲಿರುವ ಧಾಮರ್ಿಕ ಆರಾಧನೆ. `ಗಗ್ಗರ ಭೂತ ಕಟ್ಟುವ ಮಂದಿ ಎದುರಿಸುವ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಭೂತ ಕಟ್ಟುವವನನ್ನು ಕೆಳಜಾತಿಯವನೆಂದು ಸಮಾಜದಲ್ಲಿ ನಿಕೃಷ್ಟವಾಗಿ ಕಾಣಲಾಗುತ್ತಿದೆ. ಜನರೊಡನೆ ಮುಕ್ತವಾಗಿ ಆರ ಬೆರೆಯುವಂತಿಲ್ಲ. ಉಳಲು ಹೋಗುವಂತಿಲ್ಲ, ಕೂಲಿ ಮಾಡುವಂತಿಲ್ಲ. ವರ್ಷದಲ್ಲಿ ಕೇವಲ ಐದು ತಿಂಗಳು ಮಾತ್ರ ಅವರಿಗೆ ಉದ್ಯೋಗ. ಅದಕ್ಕಾಗಿ ಅಲ್ಪಮೊತ್ತ ಮತ್ತು ಆಹಾರವಷ್ಟೇ ಸಂಬಳ. ವರ್ಷದ ಇತರ ದಿನಗಳಲ್ಲಿ ಭಿಕ್ಷೆ ಎತ್ತಿಕೊಂಡು ಬದುಕಬೇಕಾದ ಪರಿಸ್ಥಿತಿ ಅವರದು. ಭೂತ ಕಟ್ಟುವ ಶಂಕರ ಎನ್ನುವವನ ಕುರಿತ ಚಿತ್ರ ಇದು. ಆತ ಓದಿ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿರುತ್ತಾನೆ. ತಂದೆಯ ನಿಧನದ ನಂತರ ಭೂತ ಕಟ್ಟುವ ಕೆಲಸವನ್ನೂ ಮುಂದುವರಿಸುತ್ತಾನೆ. ಸಮಾಜ ಉಳಿದವರಂತೆ ತಮ್ಮನ್ನೂ ಕಾಣಬೇಕು ಎಂದು ಆಗ್ರಹಿಸುತ್ತಾನೆ. ಇದರಿಂದ ಈ ಮಂದಿಗೆ ಆಥರ್ಿಕವಾಗಿಯೂ ಸಾಮಾಜಿಕವಾಗಿಯೂ ಮೇಲೇಳಲು ಸಾಧ್ಯವಾಗುತ್ತದೆ.

ಪ್ರಶಸ್ತಿ

ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರ ಪ್ರಶಸ್ತಿ -2008

ಚಿತ್ರೋತ್ಸವ

ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವ, ಗೋವಾ -2009

ನಿದರ್ೆಶಕರ ನುಡಿ

ಕನರ್ಾಟಕದ ಕರಾವಳಿ, ತುಳುನಾಡಿನಲ್ಲಿ ಭೂತಾರಾಧನೆ ಸಾಮಾನ್ಯ ದೃಶ್ಯ. ವೇಷ-ಭೂಷಣ, ಹಾಡು, ನೃತ್ಯ, ಮಾತುಗಳ ಮೂಲಕ ಬೇರೆಯೇ ಆದ ವಾತಾವರಣವನ್ನು ಇದು ಸೃಷ್ಟಿಸುತ್ತದೆ. ನಂಬಿಕೆ, ಆಚರಣೆ, ಸಾಹಿತ್ಯ, ಸಂಗೀತ ಮತ್ತು ರಂಗಭೂಮಿಯ ಸಂಗಮ ಎಂದು ಭೂತಕೋಲವನ್ನು ವಿಶ್ಲೇಷಿಸಲಾಗುತ್ತಿದೆ. ಭೂತ ವೇಷಧಾರಿ ತಾನು ಕಟ್ಟಿದ ಭೂತದ ಅವತಾರವೆನ್ನುವಂತೆ ವತರ್ಿಸಿ, ಭಕ್ತರ ಕಷ್ಟಗಳನ್ನು ಕೇಳಿ, ಸಮಸ್ಯೆಗಳನ್ನು ನೀಗಿಸಿ, ಎಚ್ಚರಿಕೆ ಕೊಡುವ ಕೆಲಸ ಮಾಡುತ್ತಾನೆ. ಕಾನೂನು ಮತ್ತು ಸಾಮಾಜಿಕ ಸಮಸ್ಯೆಗಳನ್ನೂ ಪರಿಹರಿಸುವ ಕೆಲಸ ಇಲ್ಲಿ ಆಗುತ್ತದೆ.

ತಾಂತ್ರಿಕ ವರ್ಗ

ನಿಮರ್ಾಪಕರು : ಗುರುದತ್ ಮತ್ತು ದುಗರ್ಾನಂದ

ಸಂಕಲನ : ಕೆ.ಎಂ. ಪ್ರಕಾಶ್

ಛಾಯಾಗ್ರಹಣ : ಸುರೇಶ್ ಬೈರಸಂದ್ರ

ಚಿತ್ರಕಥೆ, ಸಂಗೀತ, ನಿದರ್ೆಶನ : ಶಿವಧ್ಜಜ ಶೆಟ್ಟಿ

ತಾರಾಗಣ

ಸುಚೇಂದ್ರ ಪ್ರಸಾದ್, ಎಂ.ಕೆ ಮಠ, ಜಯಶೀಲ

ನಿಮರ್ಾಪಕರು

ಗುರುದತ್ ಅವರು ಕಳೆದ ಇಪ್ಪತ್ತು ವರ್ಷಗಳಿಂದ ಟಿವಿ ಧಾರಾವಾಹಿಗಳಲ್ಲಿ ನಿದರ್ೇಶನ, ನಿಮರ್ಾಣ ಮತ್ತು ಸಂಕಲನ ಮಾಡುತ್ತಿದ್ದಾರೆ. ಸುವರ್ಣ ಕನ್ನಡ ವಾಹಿನಿಯ ಕಾರ್ಯಕ್ರಮಗಳ ಉಪಾಧ್ಯಕ್ಷರಾಗಿ ಕಾರ್ಯ ಕೂಡ ನಿರ್ವಹಿಸಿದ್ದಾರೆ.

ಎಂ.ದುಗರ್ಾನಂದ್ ಇವರು ಕನ್ನಡದಲ್ಲಿ ಈತನಕ ಐದು ಚಲನಚಿತ್ರಗಳನ್ನು ನಿಮರ್ಿಸಿದ್ದಾರೆ. ಗಗ್ಗರ ಇವರ ಮೊದಲ ತುಳು ಭಾಷೆಯ ಚಿತ್ರ.

ನಿದರ್ೆಶಕರು

ಶಿವಧ್ವಜ್ ಶೆಟ್ಟಿ ಚಿತ್ರರಂಗದಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ವಿವಿಧ ವಿಭಾಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. 22 ಕನ್ನಡ, ಒಂದು ಮಲಯಾಳಂ ಹಾಗೂ ಒಂದು ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. `ನೀನೆ ನೀನೆ (ಕನ್ನಡ) ಇವರು ನಿದರ್ೇಶನದ ಮೊದಲ ಚಿತ್ರ. ಇವರು `ಪ್ರೊಡಕ್ಷನ್ ಹೌಸ್ ಎಂಬ ಹೆಸರಿನ ನಿಮರ್ಾಣ ಸಂಸ್ಥೆಯನ್ನು ಹೊಂದಿದ್ದಾರೆ.

‍ಲೇಖಕರು avadhi

17 June, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading