ಕಿರಣ್ ಗಾಜನೂರು
ಅತ್ಯಾಚಾರಿ ಆಸಾರಾಮ್ ಬಾಪುವಿನ ಪರವಾಗಿ ವಾದಿಸಲು 14 ಮಂದಿ ವಕೀಲರ ತಂಡವೇ ನಿಂತಿತ್ತು.
ದೇಶದ ಘಟಾನುಘಟಿ ವಕೀಲರುಗಳಾದ ಜೇಟ್ಮಲಾನಿ, ಸಲ್ಮಾನ್ ಕುರ್ಷಿದ್, ಸುಬ್ರಮಣ್ಯನ್ ಸ್ವಾಮಿ ಮತ್ತು ಇತ್ತೀಚೆಗೆ ಸುಪ್ರೀಂಕೋರ್ಟ್ ಜಡ್ಜಾಗಿ ನೇಮಕಗೊಂಡ ಉದಯ್ ಲಲಿತ್ ರಂತಹ ಪ್ರತಿ ಹಿಯರಿಂಗಿಗೆ ಕನಿಷ್ಠ 20 ಲಕ್ಷ ರೂಪಾಯಿ ಪಡೆಯುವ ವಕೀಲರುಗಳು ಜೋಧ್ ಪುರಕ್ಕೆ ಹಾರಿ ಬಂದು , ಬೆಲೆಬಾಳುವ ಆಡಿ ಕಾರುಗಳಲ್ಲಿ ಬಂದು ಅತ್ಯಾಚಾರಿಯ ಪರವಾಗಿ ವಾದಿಸುತ್ತಿದ್ದರೆ…
…ಪೂನಂ ಚಂದ್ ಸೋಳಂಕಿಯೆಂಬ ಈ ಭರವಸೆಯ ಬೆಳಕು ಸಂತ್ರಸ್ತೆಯ ಪರವಾಗಿ ವಾದಿಸಲು ಸಾಧಾರಣವಾದ ಸ್ಕೂಟರಲ್ಲಿ ಕೋರ್ಟಿಗೆ ಹೋಗುತ್ತಿದ್ದರು.
ಸೋಳಂಕಿಯವರ ತರ್ಕಬದ್ಧ ವಾದಕ್ಕೆ ನ್ಯಾಯದೇವತೆ ಮನ ಸೋತು ಅಸ್ತು ಎಂದಿದ್ದಾಳೆ,
ಆಸಾರಾಮ್ ಬಾಪುವಿನ ಅಪರಾಧ ಸಾಬೀತಾಗಿದೆ.
ಈ ಅದ್ಭುತ ಕ್ಷಣವನ್ನು ಸೋಳಂಕಿಯವರ ತಾಯಿಯವರು ಸಂಭ್ರಮಿಸಿದ್ದು ಹೀಗೆ.. ❤
Original Post Courtesy: Mohan Guruswamy






ಸತ್ಯಮೇವ ಜಯತೆ
ಬೆಳಕಲ್ಲದೇ ಮತ್ತೇನು….!