ಈ ಬಿಸಿಲಾದರೊ ಗೋಗರೆದಿತ್ತೇನೊ…

ಅಶೋಕ ಹೊಸಮನಿ

ಈ ಕಡು ಬಿಸಿಲ ಕಣ್ಣಾದರೊ ಬುದ್ಧನಾಗಬೇಕಿತ್ತು
ಕಾಲ್ಕೀಳುವ ಹೊತ್ತಿಗಾದರೊ ಹಾಜರಿರಬೇಕಿತ್ತು

ಈ ಹಿಡಿ ಮಾಂಸ ಮಜ್ಜೆಯಾದರೊ ಹೂವಾಗಬೇಕಿತ್ತು
ಹಣ್ಣೊಂದಾದರೊ ತಾಯಿಯಾಗಬೇಕಿತ್ತು

ಈ ಜಗವಾದರೊ ಹುಟ್ಟಬಾರದಿತ್ತು
ಮನುಷ್ಯನಾದರೊ ಬೇಡವಾಗಿತ್ತು

ಈ ನೇತಾಡೊ ದನಿಯಾದರೊ ಕವಿತೆಯಾಗಬೇಕಿತ್ತು
ಕಂಪನದ ಪರ್ವತವಾದರೊ ರೂಢಿಯೊಳಿರಬೇಕಿತ್ತು

ಈ ಕಣ್ಣೀರಲಿ ನೆಂದ ಬಟ್ಟೆಗಾದರೊ ರೂಪವಿರಬೇಕಿತ್ತು
ಲೋಕಕ್ಕಾದರೊ ತಥಾಗತನಂಥ ಕೀಲಿಕೈ ಬೇಕಿತ್ತು

ಈ ತನುವನ್ನಾದರೊ ಚಾಚುತ್ತಲೇ ಬೆಂಕಿಗೀಡಾಗಬೇಕಿತ್ತು
ಕಡು ಕೋಟೆಯಾದರೊ ಅಟ್ಟಹಾಸಗೈಯಬೇಕಿತ್ತು

ಈ ವಜ್ಜೆಕಲ್ಲಲ್ಲಾದರೊ ಕಾರುಣ್ಯವಿರಬೇಕಿತ್ತು
ಮುರಿದಿಹ ಬೆರಳಾದರೊ ದೂಡಬೇಕಿತ್ತು

ಈ ಕಾಲಾಳುಗಳೊ ಹಕ್ಕಿಗಳಾಗಬೇಕಿತ್ತು
ತುಂಡರಿಸಿಹ ಮರಗಳಿಗಾದರೊ ಜೀವವಿರಬೇಕಿತ್ತು

ಈ ಬಿಸಿಲ ಬುದ್ಧನಾದರೊ ಧಾವಿಸಬೇಕಿತ್ತು
ಚಿಟಿಕೆ ಅಸ್ಥಿಯನ್ನಾದರೊ ಚುಂಬಿಸಬೇಕಿತ್ತು
ಹೃದಯಕ್ಕಾದರೊ ಮದ್ದು ಅರಿಯಬೇಕಿತ್ತು

ಈ ಗೂಢ ಕಟ್ಟುಗಳನ್ನಾದರೊ ತೆರೆಯಲು
ಉರಿ ಬಿಸಿಲ ಬೆರಳುಗಳಾದರೊ ಬೇಕಿತ್ತು

ಈ ಕಡು ಗಾಳಿಯಾದರೊ ಕಾಮನಬಿಲ್ಲಂತಾಗಬೇಕಿತ್ತು
ಹೆಜ್ಜೆಗಳಲ್ಲಾದರೊ ಚಿಟ್ಟೆಗಳ ಕಲರವವಿರಬೇಕಿತ್ತು

ಈ ಬಿಸಿಲಾದರೊ ಗೋಗರೆದಿತ್ತೇನೊ
ಜಮ್ಮನ್ನಲಿಲ್ಲವೇನೊ
ಕಡು ಬುದ್ಧನಾದರೊ

‍ಲೇಖಕರು Admin

May 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: