ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ನರನಿಗೆ ಅಜೀರ್ಣವೇ ಆಗದು..

ಮೇವು

– ಅಕ್ಕಿಮಂಗಲ ಮಂಜುನಾಥ


ದನಗಳಿಗೆ ಒಂದು ಹೊರೆ
ಆಡು ಕುರಿಗಳಿಗೆ ಒಂದೆರಡು ಕೆ.ಜಿ.
ಕೋಳಿ ಕೊಕ್ಕ ಹಕ್ಕಿ ಪಿಕ್ಕಗಳಿಗೆ ಹಿಡಿ-
ಯಾದರೆ ಮಸ್ತು
ಅಷ್ಟು ತಿಂದರೆ ಸುಸ್ತು.
 
ಆದರೆ-
ಈ ನರನಿಗೆ
ಆಲದ ಮರದಷ್ಟೂ ಸಾಲದು
ಅಜೀರ್ಣವೇ ಆಗದು
 
ಉದಾಹರಣೆಗೆ
ನಮ್ಮ ನಾಯಕರನ್ನೇ ನೋಡಿ:
ಮೇವು ಬೇಕು ಅಂತ-ದನದ ಬೂಸ, ಶಾಲೆಯ ಬಿಸಿಯೂಟ, ಬಡವರ ರೇಷನ್ನು
ಛಾಪಾ ಕಾಗದ, ಯೂರಿಯ, ಬಾಟ್ಲಿಂಗ್ , ಬೋಫೋರ್ಸ, ಗಣಿ ….
ಇತ್ಯಾದಿ ಇತ್ಯಾದಿ…
ಹಗರಣ ಮಾಡಿ ತಿಂದರೂ
ಹಳ್ಳಿಯಿಂದ ದಿಳ್ಳಿವರೆಗೆ ರಸ್ತೆ-
ಬೆಟ್ಟ- ಗುಡ್ಡ, ಕಾಡು -ಮೇಡು, ಯಂತ್ರ-ಗಿಂತ್ರ
ತಂತ್ರ ಮಾಡಿ ತಿಂದರೂ
ಸಾಲದು ಅಂಥ
ಚಂದ್ರನ ಮನೆಗೂ ಕನ್ನ ಹಾಕಿ
ನೆಗೆದಿದ್ದಾನೆ-ಮಂಗಳನ ಅಂಗಳಕ್ಕೆ
ಹೊಕ್ಕು-ನಕ್ಕಿ ಮುಕ್ಕಲಿಕ್ಕೆ.
 

‍ಲೇಖಕರು G

28 September, 2014

3 Comments

  1. KBS

    Wow!!!!

  2. RAVINDRANATHA

    Todays Mirror Reflection of our Society’s situation.

  3. AKKIMANGALA.NARAYANAPPA.RAVINDRANATHA

    Yella Maayavo…………………

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading