ಪ್ರಶಸ್ತಿ ತಿರಸ್ಕಾರ ಈಗ ಆಂದೋಲನವಾಗಿ ಬದಲಾಗಿದೆ. ಜೊತೆಗೆ ಚರ್ಚೆಗೆ ಕಾರಣವಾಗಿದೆ. ಸರ್ಕಾರ ಗಾಬರಿಯೂ ಆಗಿದೆ. ಪ್ರಶಸ್ತಿ ವಾಪಸಾತಿಯಿಂದ ಒಂದು ಕಂಪನವಂತೂ ಆರಂಭವಾಗಿರುವುದು ನಿಜ.
ಈಗ ಮಾಡೇವಿ ಆರಂಭ.. ದಿಲ್ಲೀ ಒಳಗಾ ರಣಗಂಭ ಎನ್ನುವ ಹಾಡಿನಂತೆ ಒಂದು ಸಾಹಿತ್ಯ ಕ್ಷೇತ್ರದ ಸಾತ್ವಿಕ ಕೋಪ ಸಾಕಷ್ಟು ಕೆಲಸ ಮಾಡಿದೆ.
ಈಗ ಅದನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಲು ‘ಬುದ್ದಿಜೀವಿಗಳ ಏಕತಾ ಸಮಾವೇಶ ಜರುಗಲಿದೆ.
ಅಲ್ಲಿ ನಾನೇಕೆ ಪ್ರಶಸ್ತಿ ತಿರಸ್ಕರಿಸಿದೆ ಎನ್ನುವ ಅಭಿಪ್ರಾಯಗಳನ್ನು ಒಳಗೊಂಡ ಪುಸ್ತಕವೂ ಬಿಡುಗಡೆ ಆಗಲಿದೆ
ಪ್ರಶಸ್ತಿ ತಿರಸ್ಕಾರದಿಂದ ಸರ್ಕಾರಕ್ಕೆ ಗಾಬರಿಯಾಗಿಲ್ಲ; ಕಂಪನವಂತೂ ಆರಂಭವಾಗಿಲ್ಲ. ಇದಕ್ಕೆ ಬದಲಾಗಿ ದಿಲ್ಲಿಯಲ್ಲಿ ಪ್ರಶಸ್ತಿ ಪಡೆದ ಪುಸ್ತಕಗಳನ್ನು ಆಯಾ ಲೇಖಕರಿಗೇ ವಾಪಸಾತಿ ಮಾಡುವ ಚಳುವಳಿ ಆರಂಭವಾಗಿದೆ. ಇದು ದೇಶದಾದ್ಯಂತ ಹಬ್ಬಬಹುದು. ಈ ಪ್ರಶಸ್ತಿ ವಿಜೇತರ ಹೆಸರನ್ನೂ ಕೇಳದ ಜನಸಾಮಾನ್ಯರೇ ಅತ್ಯಧಿಕವಾಗಿರುವ ಭಾರತದಲ್ಲಿ ಒಂದಷ್ಟು ಜನ ಸಾಹಿತಿ ಕಲಾವಿದರ ಪ್ರಶಸ್ತಿ ತಿರಸ್ಕಾರ ಹಬ್ಬದಿಂದ ಏನೂ ಬದಲಾವಣೆಯಾಗುವುದಿಲ್ಲ. ಇವರು ಮತ್ತು ಇವರ ಪುಸ್ತಕಗಳನ್ನು ಓದಿದವರು, ನಾಟಕ ಸಿನಿಮಾಗಳನ್ನು ನೋಡಿದವರು ಚುನಾವಣೆಯದಿನ ಮನೆ ಬಿಟ್ಟು ಆಚೆ ಬಂದು ಮತಗಟ್ಟೆಗೂ ಹೋಗುವುದಿಲ್ಲ. ಹಾಯಾಗಿ ಮನೆಯಲ್ಲೇ ಕುಳಿತು ರಜೆಯನ್ನು enjoy ಮಾಡುತ್ತಾರೆ. ಸರ್ಕಾರಕ್ಕೆ ಇನ್ನೆಲ್ಲಿಯ ಗಾಬರಿ? ಇನ್ನ್ಯಾವ ಕಂಪನ ಸ್ವಾಮೀ?
ತೀರ್ಥಳ್ಳಿಯ ಆ ಮುದ್ದುಮುಖವನ್ನೂ ಈ ರಾಜಕೀಯ ಪ್ರಹಸನದಲ್ಲಿ ಎಳಕೊಳ್ಳಲೇಬೇಕಿತ್ತೆ? ಛೇ..