ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು “ಏಳಾಟ”ವಯ್ಯ!

chitra6.jpg

 

ಟೈಂ ಪಾಸ್ ಕಡ್ಲೆಕಾಯ್ 

“ಎದ್ದೇಳೋ ಮಾದಪ್ಪ ಎಷ್ಟೊತ್ತು ಸುಖ ನಿದ್ರೆ” ಎಂಬ ಸುಪ್ರಭಾತ ಕೇಳಿದವರಂತೆ ಸುಳ್ಯ ಸಾಹಿತಿ ಪ್ರಭಾಕರ ಶಿಶಿಲ ಧಡಕ್ಕನೆ ಎದ್ದು ಕೂತಿದ್ದಾರೆ.

ಏಳು ಏಳ್ಲಿ ಎಷ್ಟು ಅಂತ ಎಲ್ಲಾರ್ಗೂ ಕೇಳೋವಷ್ಟು ಏಳರ ಸಂಖ್ಯೆಯ ಗಾಳಿ ಬೀಸಿಸಿಕೊಂಡಿದ್ದಾರೆ. ವಿಷ್ಯ ಇಷ್ಟೆ: ಈ ಸಲದ ಜುಲೈ ೭ ಸ್ವಲ್ಪ ವಿಚಿತ್ರ. ೭-೭-೭. ಶಿಶಿಲರಿಗೂ ಇದು ಗೊತ್ತಾಯಿತು. ತಕ್ಷಣ ತಮ್ಮ ಏಳು ಪುಸ್ತಕ ರೆಡಿ ಮಾಡಿದ್ರು. ಬೆಳ್ಳಂಬೆಳಗ್ಗೆ ೭ ಗಂಟೆ ೭ ನಿಮಿಷಕ್ಕೆ ೭ ಅತಿಥಿಗಳಿಂದ ಪುಸ್ತಕ ಬಿಡುಗಡೆ ಮಾಡಿಸಿದ್ರು. ಪ್ರೋಗ್ರಾಮ್ ೭x೭=೪೯ ನಿಮಿಷ ಮಾತ್ರ ನಡೀಬೇಕು ಅಂತಾ ತಾಕೀತು ಮಾಡಿದ್ರು.

ಇಷ್ಟೇ ಅಲ್ಲ, ಪ್ರೋಗ್ರಾಮ್ ಗೆ ೭ ಮಂದಿಯ ಪ್ರಾರ್ಥನೆ. ಅದಕ್ಕಿಂತ ಇಂಟರೆಸ್ಟಿಂಗ್ ಅಂದರೆ ೭ ಥರ ತಿಂಡಿ.

ಪ್ರಭಾಕರ ಶಿಶಿಲ ಅನ್ನೋ ಹೆಸರಲ್ಲೂ ೭ ಅಕ್ಷರ. ಹಾಗಾಗಿಯೇ ಈ “ಏಳಾಟ”.

(ಸುದ್ದಿ ಬಿಡುಗಡೆ ಪೇಪರ್ ನಲ್ಲಿ ಬಂದಿದ್ದನ್ನ ಫೋನಲ್ಲಿ ಯಾರೋ ಹೇಳಿದ್ದು ಕೇಳಿ, ನಿಮಗೂ ಇಂಟರೆಸ್ಟಿಂಗ್ ಆಗಿರುತ್ತೆ ಅಂತ ಕೊಡಲಾಗಿದೆ.)

‍ಲೇಖಕರು avadhi

13 July, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading