ದೇವರೇ ಹೇಳಿದ ಮೇಲೆ…

ಮೂವರು ಗೆಳೆಯರು ಬಹಳ ದಿನದ ನಂತರ ಭೇಟಿಯಾದರು. ಅವರಿಗೆ, ಹಂಚಿಕೊಂಡು ತಿನ್ನಲೂ ಆಗದಷ್ಟು ಚಿಕ್ಕ ಹಲ್ವಾ ತುಂಡು ಸಿಕ್ಕಿತು. ಈ ರಾತ್ರಿ ಯಾರಿಗೆ ವಿಶೇಷವಾದ ಕನಸು ಬೀಳುವುದೋ ಅವರು ಇದನ್ನು ತಿನ್ನುವುದೆಂದು ನಿರ್ಧರಿಸಿ ಅವರು ಆ ಹಲ್ವಾ ತುಂಡನ್ನು ಡಬ್ಬದಲ್ಲಿಟ್ಟು ಮಲಗಿದರು.

ಮಾರನೆ ಬೆಳಗು ಮೂವರೂ ತಮ್ಮ ತಮ್ಮ ಕನಸಿನ ಬಗ್ಗೆ ಹೇಳಿಕೊಂಡರು. ಒಬ್ಬನೆಂದ: “ನನ್ನ ಕನಸಿನಲ್ಲಿ ದೇವರು ಬಂದಿದ್ದ. ನನ್ನನ್ನು ಹೂದೋಟಕ್ಕೆ ಕರೆದುಕೊಂಡು ಹೋಗಿ ಎಷ್ಟೆಲ್ಲಾ ಸೊಗಸುಗಳನ್ನು ತೋರಿಸಿದ.”

ಮತ್ತೊಬ್ಬ: “ನನ್ನ ಕನಸಲ್ಲೂ ದೇವರು ಬಂದಿದ್ದ. ಆದ್ರೆ ನಾನೇ ಅವನನ್ನು ಹೂದೋಟಕ್ಕೆ ಕರೆದುಕೊಂಡು ಹೋಗಿ ಬಗೆಬಗೆಯ ಸೊಗಸನ್ನು ತೋರಿಸಿದೆ.”

ಈಗ ಮೂರನೆಯವನ ಸರದಿ. ಆತ ಹೇಳಿದ: “ನನ್ನ ಕನಸಲ್ಲೂ ದೇವರು ಬಂದಿದ್ದ. ಆದರೆ ನಾವು ಹೂದೋಟಕ್ಕೇನೂ ಹೋಗಲಿಲ್ಲ. ದೇವರು ನನಗೆ “ಎದುರಲ್ಲೇ ಹಲ್ವಾ ತುಂಡು ಇಟ್ಟುಕೊಂಡು ಕನಸು ಕಾಣ್ತಾ ಇದ್ದಿಯಲ್ಲೊ ದಡ್ಡಾ, ಮೊದಲು ಆ ಹಲ್ವಾ ತಿನ್ನು” ಅಂದ. ದೇವರೇ ಹೇಳಿದ ಮೇಲೆ ಆಗದು ಅನ್ನೋಕ್ಕಾಗುತ್ತಾ? ಹಲ್ವಾ ತಿಂದುಬಿಟ್ಟೆ” ಅಂದ.

ಉಳಿದಿಬ್ಬರೂ ಡಬ್ಬದ ಮುಚ್ಚಳ ತೆಗೆದು ನೋಡಿದರು. ಹಲ್ವಾ ತುಂಡು ಇರಲಿಲ್ಲ.

‍ಲೇಖಕರು avadhi

July 13, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: