ಇಂದಿನ ಚಂದಿರ

ಅಜಯ್ ನೀನಾಸಂ

ಮತ್ತೇಕೆ ಬೆಳಗುವೆ ಇಷ್ಟು ಉಜ್ವಲವಾಗಿ
ಕತ್ತಲಾವರಿಸಿರುವ ಈ ಘಳಿಗೆ

ಯಾರ ಮೋಹ ಕೆರಳಿಸಬಲ್ಲೆ
ಯಾರ ಪ್ರೇಮ ಅರಳಿಸಬಲ್ಲೆ.

ಮತ್ತೇಕೆ ಬೆಳಗುವೆ ಇಷ್ಟು ಉಜ್ವಲವಾಗಿ
ಮನುಕುಲವೇ ನರಳಿ ಉಸಿರ ಚೆಲ್ಲುವ ಈ ಘಳಿಗೆ

ಬೆಳಗಿಸಬಲ್ಲೆಯೇನು ಸತ್ತವರ ಮನೆಯ ದೀಪವನ್ನು
ತೊಳೆಯಬಲ್ಲೆಯೇನು ಕೊಂದವರ ಕೈಯ ಪಾಪವನ್ನು

ಮತ್ತೇಕೆ ಬೆಳಗುವೆ ಇಷ್ಟು ಉಜ್ವಲವಾಗಿ
ಊರಿಗೂರೇ ಸ್ಮಶಾನವಾದ ಈ ಘಳಿಗೆ

ಅಮ್ಮನಿಲ್ಲದಂತಾದ ಮಕ್ಕಳ ಎತ್ತಾಡಿಸ ಬಲ್ಲೆಯೇನು
ಅಪ್ಪನಿಲ್ಲದೆ ಕುಸಿದ ಮನೆಯ ಎತ್ತಿ ನಿಲ್ಲಿಸಬಲ್ಲೆಯೇನು.
ಬಂಧುಗಳಿಲ್ಲದ ಬಡಪಾಯಿಗಳ ಪಾಲಿಸಬಲ್ಲೆಯೇನು.

ಮತ್ತೇಕೆ ಬೆಳಗುವೆ ಇಷ್ಟು ಉಜ್ವಲವಾಗಿ
ಪ್ರಾಣಪಕ್ಷಿಗಳು ಹಾರಿ ಕಾಂಚಾಣ ಝಣ ಝಣಿಸುವ ಈ ಘಳಿಗೆ

ಪ್ರೇಮ ಪಕ್ಷಿಗಳ ಕಲರವ ಕೇಳಿಸಬಲ್ಲೆಯೇನು
ಅಮ್ಮಾ… ಎಂದರಚುವ ಹಸುಗೂಸುಗಳಿಗೆ
ಎದೆಹಾಲುಣಿಸ ಬಲ್ಲೆಯೇನು.
ಎಲ್ಲ ಕಳೆದುಕೊಂಡವರ ಬಾಳ ಬೆಳಗಿಸಬಲ್ಲೆಯೇನು.

ಮತ್ತೇಕೆ ಬೆಳಗುವೆ ಇಷ್ಟು ಉಜ್ವಲವಾಗಿ
ಮೌನ ಆವರಿಸಿರುವ ಈ ಘಳಿಗೆ

ಮಾತನಾಡಬಲ್ಲೆಯೇನು
ಹಾಡಬಲ್ಲೆಯೇನು
ಕುಣಿಯ ಬಲ್ಲೆಯೇನು

ಮತ್ತೇಕೆ ಬೆಳಗುವೆ ಇಷ್ಟು ಉಜ್ವಲವಾಗಿ
ಮಾನ ಪ್ರಾಣಕ್ಕೆ ಹಂಬಲಿಸುತ್ತಿರುವ ಈ ಘಳಿಗೆ

ಸ್ವಾಭಿಮಾನವ ಉಳಿಸಬಲ್ಲೆಯೇನು
ಅಪಮಾನಗಳ ಅಳಿಸಬಲ್ಲೆಯೇನು
ಹಸಿದ ಹೊಟ್ಟೆಗಳ ತುಂಬಿಸಬಲ್ಲೆಯೇನು

ಮತ್ತೇಕೆ ಬೆಳಗುವೆ ಇಷ್ಟು ಉಜ್ವಲವಾಗಿ
ಹೆಣಗಳ ರಾಶಿ ತೇಲಿಬರುವ ಈ ಘಳಿಗೆ

‍ಲೇಖಕರು Avadhi

June 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: