ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಹಾ… ಬದುಕೆಂಬುದು ಸಾವಕುಸುರಿ…

ಆಹಾ ಬದುಕೆಂಬುದು ಸಾವ ಕುಸುರಿ..’ ಎಂದು ಉದ್ಘರಿಸಿದ ಎನ್ ಕೆ ಹನುಮಂತಯ್ಯ ಸಾವಿಗೆ ಶರಣಾಗಿದ್ದಾರೆ. ‘ಚಿತ್ರದ ಬೆನ್ನು’ ಸಂಕಲನಕ್ಕೆ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಗಳಿಸಿದ ಹನುಮಂತಯ್ಯ ಬದುಕೆಂಬ ಚಿತ್ರಕ್ಕೆ ಬೆನ್ನು ಹಾಕಿ ಬಹು ದೂರ ನಡೆದು ಹೋಗಿದ್ದಾರೆ. ಹನುಮಂತಯ್ಯ ಸಾವಿಗೆ ‘ಅವಧಿ’ ಸಂತಾಪ ಸಲ್ಲಿಸುತ್ತದೆ…

ಸಾವ ಕುಸುರಿ

ಒಳಗೂ ಹೊರಗೂ
ಧಗೆ
ಮೇಲೆ ಸಾಯದ
ಸೂರ್ಯ
ಆಗಾಗ ಹಾರುವ ಹದ್ದಿನ ನೆರಳೆ
ಮಳೆಹನಿ
ನಡೆದಷ್ಟೂ ದೂರ ಕಣ್ಣೊಳಗಿನ ತೀರ

ಬಿರುಗಾಳಿಗೆ ಬಿದ್ದ ಬಾಗಿಲ ಮುಂದೆ
ಮಾಲಿಕನ ಹೆಣ ತಿನ್ನುತ್ತಿದೆ
ಸಾಕುನಾಯಿ
ಆ ನಾಯ ಬಾಯಲ್ಲಿ ಕೋವಿಯೆಲುಬಿನ ಸದ್ದು
ಹೆಪ್ಪುಗಟ್ಟಿದ ನೆತ್ತರ ಬಯಲಲಿ
ನೀರ ಹುಡುಕುವ ಮೂಢ ನಾನು
ಅಳುತ ನಿಂತೆ

ಹತ್ತಿರದಿ ಕಂಡಿತು
ಕಾಲದ ಚಿಗುರಂತೆ ಹೊಳೆವ ಪಾಳು ದೇಗುಲ
ಭೋಗಿಸಿದರೆ ಬಸಿರಾಗುವೆನೆಂದು ಕೂಗುವ
ಶಿಲಾಬಾಲೆ
ನೋಟ ಮೀಟಲು ಉಲಿವ ಕಲ್ಲುವೀಣೆ
ಮೈಮರೆತು ಎವೆಮುಚ್ಚಿದೆ

ಕಂಡೆ;
ಒಳಗಣ್ಣ ತಳದ ಕುದಿವ ಕಣ್ಣೀರಿನಲಿ
ಈಜುವ ಸಾವ ಮೀನ

ಶಿಶುವಾಗಿ ಇಳಿದೆ ಇಳಿದೆ
ಹಿಡಿದೆ ಹಿಡಿದೆ ಏರಿದೆ ಏರಿದೆ
ಮೀನ ಬೆನ್ನನು ಏರಿ ಗಾಳಿಗೆ ಹಾರಿದೆ ಹಾರಿದೆ
ಆದಿ ಅಂತ್ಯದ ಅಗ್ನಿಹಿಮಗಡಿದಾಟಿ
ಭುವಿಯಾಗಿ ಬಾನಾಗಿ ನಾನಾಗಿ
ತೇಲುತ್ತ… ತೇಲುತ್ತ…

ಆ… ಶಿಲಾಬಾಲೆ, ಕಲ್ಲುವೀಣೆ
ಗುಡಿ, ಗೋಪುರ, ಅಕ್ಷರ
ಆ… ಕುಕ್ಕೆ ಕಂಬಳಿ, ಕುಡಿಕೆ
ಆಹಾ… ಬದುಕೆಂಬುದು
ಸಾವಕುಸುರಿ.

ಎನ್ ಕೆ ಹನುಮಂತಯ್ಯ

ಕೃಪೆ: ಕೆಂಡಸಂಪಿಗೆ

‍ಲೇಖಕರು avadhi

17 April, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

2 Comments

  1. d.s.ramaswamy

    no a poet should not think death, may has its pressure taken him away from all of his fans n friends? I am sorry.

    • ಗಾಣಧಾಳು ಶ್ರೀಕಂಠ

      ‘ಹಿಮದ ಹೆಜ್ಜೆ’ಯ ಗೆಳೆಯ, ಕಾಲೇಜಿನ ಸಹಪಾಠಿಯೊಬ್ಬನನ್ನು ಕಳೆದುಕೊಂಡ ವಿಷಾದ . ಹನುಮಂತನ ಆತ್ಮಕ್ಕೆ ಶಾಂತಿ ಸಿಗಲಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading