ಇಂದು ಬರೆಯುತ್ತಿರುವ ಪ್ರಮುಖರಲ್ಲಿ ವೀರಣ್ಣ ಮಡಿವಾಳರ ಅವರದ್ದು ಭಿನ್ನ ದನಿ. ತಮ್ಮ ನೆಲದ ಕರುಣೆಯ ದನಿಗಾಗಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರವನ್ನು ಪಡೆದಿದ್ದಾರೆ. ಅದೇ ನೆಲದ ಕರುಣೆಯ ದನಿಯ ಕವಿತೆಗಳನ್ನು ತಮ್ಮ ಓರಿಗೆಯ ಸಾಹಿತಿಗಳ ಮೂಲಕ ಓದಿಸಿ ಕೇಳು ಪುಸ್ತಕವಾಗಿಯೂ ಹೊರ ತಂದಿದ್ದಾರೆ. ವೀರಣ್ಣ ಅವರ ಬರಹ ಸಂಕಟಗಳ ಒಂದು ಗುಚ್ಛ.
ವೀರಣ್ಣ ಅಭಿವ್ಯಕ್ತಿಗೆ ಒಂದಲ್ಲ ಹಲವು ಮಾರ್ಗಗಳು- ಫೋಟೋಗ್ರಫಿ, ಚಿತ್ರ ರಚನೆ ಹಾಗೆ ತಮ್ಮ ನಿರಂತರ ಓದು. ತಮ್ಮ ಶೈಕ್ಷಣಿಕ ಬದುಕನ್ನೂ ಅಷ್ಟೇ ಅಚ್ಚುಕಟ್ಟಾಗಿ ಕಟ್ಟಿಕೊಂಡಿರುವ ಇವರಿಗೆ ರಾಷ್ಟ್ರಪತಿಗಳು ಮೊನ್ನೆ ಚಿನ್ನದ ಪದಕದೊಂದಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಶ್ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರಾಂಕ್ ಗಳಿಸಿದ ಹೆಮ್ಮೆ ಇವರದ್ದು
ಅವಧಿಯ ಓದುಗರೂ, ಅವಧಿಗೆ ಸಾಕಷ್ಟು ಬರಹಗಳನ್ನು ಬರೆದಿರುವ ವೀರಣ್ಣ ಮಡಿವಾಳರಿಗೆ ಅಭಿನಂದನೆಗಳು
First Rank ನೊಂದಿಗೆ ಚಿನ್ನದ ಪದಕ. (MA in English Literature)
ನನ್ನ ಜೀವದ ಜೀವ ಚುಕ್ಕಿಗೆ , ಅವಳ ಪ್ರೀತಿಗೆ ಇದು ನನ್ನ ಕಿರು ಕಾಣಿಕೆ.
ಅಭಿನಂದನೆಗಳು
ರಜೀ ಅಭಿನಂದನೆಗಳು
congratulations veeranna. Innoo ettarettarada sadhanegalu nimmadagali
Congrats..