ಹನುಮೇಶ್ ಮಳಗಿ
ನೇಗಿಲ ಹಿಡಿದು ಬತ್ತಿದಾ ಹೊಲದೊಳು
ಅಳುವಾ ಯೋಗಿಯ ನೋಡಿಲ್ಲೀ
ಪೂಜೆಯ ಫಲವು ಸಾಲದ ಹೊರೆಯು
ಉರುಳೇ ಇಹಪರ ಸಾಧನವು
ದುಡಿದಾ ಅನ್ನವೇ ಕಷ್ಟಕೆ ಭಾಗೀ
ಸೃಷ್ಟಿ ನಿಯಮವೆ ಅವನಿಗೆೆ ನೇಣಾಗಿ
ಲೋಕದೊಳೆಲ್ಲವು ನಡೆಯುತಲಿರಲಿ
ತನ್ನೀ ಕಾರ್ಯಕೆ ವಿಘ್ನಗಳೆನಿತು
ರಾಜರು ಮೆರೆಯಲಿ ಭೋಗದಿ ಮುಳುಗಲಿ
ನೇಗಿಲ ಗುದ್ದಲೀ ಸೌಧದಲೀ
ಮುತ್ತಿಗೆ ಹಾಕಲಿ ಕೀಟಗಳೆಲ್ಲಾ
ಬಿತ್ತಿಯು ಅಳುವಿಗೆ ಬಿಡುಗಡೆ ಇಲ್ಲ
ಮುಳುಗಿತು ನಮ್ಮೀ ವೈಚಾರಿಕತೆಯು
ಮಣ್ಣಿನ ಯೋಗಿಯ ಆಶ್ರಮದೀ
ನೇಗಿಲ ಹಿಡಿದಾ ಕೈಸೋತಿರುವಲ್ಲಿ
ನೇಗಿಲ ಹಿಡಿದಾ ಕೈಯೊಡ್ಡಿದೆಯಿಲ್ಲಿ
ದೊರೆಗಳ ದರ್ಪವು ಮೀರಿರುವಲ್ಲಿ
ನೇಗಿಲ ಬಲದಲಿ ರಾಜರು ಮೆರೆದರು
ಗುಂಡುಗಳೆಸೆದರು ಕತ್ತನು ತರಿದರು
ಏನೂ ಅರಿಯದಾ ಯೋಗಿಯು ಮುಲುಗುತ ತಾನು
ಲೋಕಕೆ ಅನ್ನವ ನೀಡುತ ಮಿಡಿದಿಹನು
ಅವನಾ ಹೆಸರಲಿ ಬಲಿತಿಹ ನಾಯಕ
ಯೋಗಿಯು ನಡೆಸಿಹ ನಿಸ್ಪ್ರಹ ಕಾಯಕ
ನೇಗಿಲು ಆಗೆ ಕುಣಿಕೆಯ ಕರ್ಮ
ಯೋಗಿಯ ಗೋರಿಯ ಮೇಲಿದೆ ಧರ್ಮ
ಅಳುವಾ ಯೋಗಿಯ ನೋಡಿಲ್ಲೀ…
(ಮಾನ್ಯ ಕುವೆಂಪುರವರ ಕ್ಷಮೆ ಕೋರಿ)
ಹಾಡು ಕಣ್ಣೀರು ಬರಿಸಿತು.
ಕವಿತೆ ಚೆನ್ನಾಗಿದೆ. ಇಲ್ಲಿ ಬಳಸಿದ ಫೋಟೋ ತರಹ ಪತ್ರಿಕೆಗಳಲ್ಲೂ ಬರಡು ನೆಲದ ಮೇಲೆ ನಿಂತು ಅಗಸ ನೋಡುವ ರೈತನ ಫೋಟೋಗಳು ಬರುತ್ತವೆ. ಯಾಕೋ ಸ್ವಲ್ಪ ಕೆಟ್ಟದೆನಿಸ್ತಾ ಇದೆ.
sakaalika kavite..