ವಿಸ್ಮೃತಿ
ರೋಹಿಣಿ ಸತ್ಯ
ನಮ್ಮ ಮಿಲನ ಕನಸಾಗಿ ಕಂಡಾಗ ಹೊರಬಿದ್ದ ನಿಟ್ಟುಸಿರು
ಉಛ್ವಾಸದಲ್ಲಿ ಒಳಸೇರಿ ನಿಶ್ವಾಸದಲ್ಲಿ ಹೊರಬರುತ್ತಿದೆ
ಉಸಿರೇ ನಿನ್ನ ರೂಪು ಆದ ಕಾರಣ
ಕಣ್ಣಮುಂದೆ ಕ್ಷಣಕಾಲ ನಿಲ್ಲಿಸಹೊರಟರೇ
ಜೀವ ಅಂಗೈಯಲ್ಲಿ ಬಂದು ನಿಲ್ಲುತ್ತಿದೆ
ಅಲೆಸೋಕದ ಮರಳಿನ ಕಣಗಳಂತೆ ನಿಸ್ತೇಜವಾಗಿದೆ ಮನ
ನೆಲೆಕಾಣದ ನಾವೆಯಂತೆ ಅನಾಥವಾಗಿದೆ ಜೀವನ
ನೋವಿನಿಂದ ಸುಕ್ಕುಗಟ್ಟಿದ ವದನಕೆ
ಬಲವಂತವಾಗಿ ನಗುವಿನ ಲೇಪನವದ್ದಿದರೇ
ಕನ್ನಡಿಯಲ್ಲಿ ಕಾಣುವ ರೂಪ ಸುಂದರವಾಗಿ ಕಂಡರೂ
ಅಂತರಂಗದಲ್ಲಿ ಅದೇ ಕಲಾವಿಹೀನ ವದನ
ಭಾವನೆಗಳು ಆಸೆಯ ಜಲಪಾತದ ಮೋಡಿಯಲ್ಲಿ
ನಿರಾಶೆಯ ಬಂಡೆಗಳಿಗಪ್ಪಳಿಸಿ ಛಿದ್ರವಾಗುತ್ತಿರೇ
ನಿನ್ನ ಸಾಂತ್ವನವು ಪುಟ್ಟ ದೋಣಿಯಾಗಿ
ದಡ ಸೇರಿಸುವುದೆಂಬ ನಂಬಿಕೆಯು ನಿರಾಧಾರವಾದಾಗ
ಚಿತ್ರ ಸ್ಪಷ್ಟವಾಗಿದೆ –
ಕಲ್ಪನೆಯ ಕ್ಷಿತಿಜದ ಅಂಚುಗಳ ಸೇರಿಸುವುದು ದುಸ್ತರ
ನೈಜಸ್ಥಿತಿಯ ವಸ್ತುಚಿತ್ರಣ ಹೆಚ್ಚಿಸಿದೆ ನಡುವಿನ ಅಂತರ
ಆಗ…..
ಕನಸಾಗಿ ಕಾಡುವ ನಿನ್ನ ಸ್ಮೃತಿಗಿಂತಲೂ
ವರವಾಗಿ ವರಿಸುವ ವಿಸ್ಮೃತಿ ಮೇಲೆನಿಸುತ್ತದೆ
ಕನಸಾಗಿ ಕಾಡುವ ಸ್ಮೃತಿಯೇ ಕವಿತೆಯನ್ನು ಜೀವಂತವಾಗಿಸಿದೆ.ರೋಹಿಣಿಯವರೆ.ಚೆನ್ನಾಗಿದೆ.
ಅದ್ಭುತವಾದ ಕಾವ್ಯ ರಚನೆ ಸುಂದರವಾಗಿ ಮೂಡಿ ಬಂದಿದೆ. ಕಾವ್ಯದ ಕುಸುರಿತನದಲ್ಲಿ ಜೀವಂತಿಕೆಯ ಚಿತ್ರಣವನ್ನು ಹಿಡಿದಿಟ್ಟಿರುವುದು ಇಷ್ಟವಾಯಿತು. ಭಾವಸ್ಫೂರ್ತಿಯ ಪದಗಳು ಮತ್ತೆ ಮತ್ತೆ ಓದಬೇಕೆನ್ನಿಸುವಂಥವು. ಇದೊಂದು ಶ್ರೇಷ್ಟ ಕವಿತೆಗಳ¯ಲ್ಲೊಂದು ಎಂದರೆ ತಪ್ಪಾಗಲಿಕಿಲ್ಲ.
Dhanyavaadagalu Noorulla tyamagondlu, Veeranna mantalker avarige!
“ಕನಸಾಗಿ ಕಾಡುವ ನಿನ್ನ ಸ್ಮೃತಿಗಿಂತಲೂ
ವರವಾಗಿ ವರಿಸುವ ವಿಸ್ಮೃತಿ ಮೇಲೆನಿಸುತ್ತದೆ” ಚೆನ್ನಾಗಿದೆ. liked these lines.Kudos
ಚೆನ್ನಾಗಿದೆ; ಪದ್ಯ.
Rohini, good poem. padagalantu nimage chennaagi olidide. bhavagalannu adaralli sundaravaagi hididittiddeera. all the best
dhanyavaadagalu S.P.Vijaya lakshmi!
dhanyavaadagalu Akkimangala Manjunaath Vaasudev avarige
chennaagide
Dhanyavaadagalu sir!