
ಎಂ ಎಸ್ ಕೃಷ್ಣಮೂರ್ತಿ ಗೀತಾ
ಅರೇ ಇಸ್ಕಿ
ನಮ್ದು ಸುಲೇಮಾನ್ ಪಾಶಗೆ ಇಲ್ವ
ಹೇಳ್ತಿದ್ದಾ
ನಿಮ್ದು ಕಾಮ್ ನೀವು ಮಾಡಿ
ಕಾಮ್ಗೆ ತಕ್ಕಂತೆ ಅಲ್ಲಾ ಕೊಡ್ತಾನೆ
ಯಾರಲ ಯೋಳಿದ್ದು ಅಂದ್ರೆ
ಕಿಸ್ನ ಹೇಳವ್ನೆ ಅಂತಾನೆ
ನಮ್ದು ವೆಂಕ್ಟಾಚಲಪತಿಗೆ ನಮಾಜ್ ಹೇಳ್ಕೊಟ್ಟವನೆ
ವೆಂಕ್ಟಾಚಲಪತಿ ಅದೇನೂ ಜಪ ಹೇಳ್ಕೊಟ್ಟವನೆ
ಅರೇ ಇಸ್ಕಿ ನಮ್ದು ವೆಂಕ್ಟಾಚಲಪತಿ ಇಲ್ವ
ಗೋಕಾಲಷ್ಟಮಿ ತಿಂಡಿಗೆ ಕರಿತಾನೆ ನಂಗೆ
ಇಮಾಂಸಾಬಿ ಮನೆಗೆ ಬಾರಲ ನೀನು ಕರ್ಣ ಇದ್ದಂಗೆ
ಯಾಪಾಟಿ ದಾನ ಮಾಡ್ತಿಯಾ ಅಂತ.





ಕವಿತೆ ಚೆನ್ನಾಗಿದೆ