ಅರೆರೇ ! ಹೇಳಲು ಮರೆತಿದ್ದೆ..

ಮೂರುವರೆ ಯುಗ…

ನಾಗೇಶ ಮೈಸೂರು

ಕಡೆಗೂ ಸಿಕ್ಕಿತು ರಹದಾರಿ
ತೆರೆದು ದಿಡ್ಡಿ ಬಾಗಿಲು
ಕಾಲದತ್ತ ನಡಿಗೆ
ಭೂತ-ಭವಿತ, ಪ್ರಸ್ತುತದಿಂದ.

click_aytu_kaviteಕಾಲ ಯಾನದ ಯಂತ್ರ
ಇಷ್ಟು ಸರಳ ಸುಲಭದ್ದೆಂದು
ಯಾವ ವಿಜ್ಞಾನಿಗೂ ಕೂಡಾ
ಇಲ್ಲಿತನಕ ಹೊಳೆದೇ ಇರಲಿಲ್ಲ !
ಪುಟ್ಟ ಬಾಲನೂ ಬೆನ್ನಲ್ಲಿ
ಹೊತ್ತು ನಡೆಯುವಾ ಜಗ
ಕಲ್ಪನೆಯ ಮೂಸೆಯಲಿ ಪಯಣ
ಹೆಜ್ಜೆಗೊಂದೊಂದೆ ತೆರೆದು ಹೆಬ್ಬಾಗಿಲು.

ಇಟ್ಟುಕೊ ಬೆನ್ನಿಗೆ ಆನಿಸಿ
ಕಪ್ಪು ಬಿಳುಪಾಗುತ ವಾಸ್ತವ
ಅದು ಭೂತಕೆ ನಡೆವ ವಿಧಾನ !
ತೆಗೆದಿಟ್ಟುಕೊ ಮುಂದೆ ಎದೆಗೆ
ಹೃದಯ ಬಡಿತದ ಕಡೆಗೆ
ಬಣ್ಣಬಣ್ಣ ರಂಗಿನ ಭವಿಷ್ಯದ ಜಾಗ !!
ಮತ್ತೇನಿಲ್ಲ ಕೀಲು, ಕಡ್ಡಿ, ಗುಂಡಿ
ಬೇಕೆಂದಾಗ ಮನಸೊಂದೆ ಅಡ್ಡಿ.

ಅರೆರೇ ! ಹೇಳಲು ಮರೆತಿದ್ದೆ

ಜೋತುಬಿದ್ದಾ ಕಾಲನೇಮಿ – ಮನಸು
ಜೊತೆಗೆ ಮೂರುವರೆ ಯುಗ ದಾಟಿದ್ದೂ
ಕಣ್ಣಿರದ ಬೆನ್ನಿಗೆ ಆತು ಕೂತೆ ;
ಹೊಂಡದಿಂದೆದ್ದು ಬಂದರು ಬೆನ್ನಲ್ಲೆ
ಕೂತು ತೆರೆದು ವಿಶಾಲ ಜಗ ವಿಸ್ತಾರ
ಕುದುರೆ ಮೈದಾನ ಕನಸು ಪ್ರಾಯ
ತಾನಾಗಿ ಅಶ್ವಮೇಧ ಯಾಗಾಶ್ವ.

ಕಂಡಿತೇನು ಹೆಜ್ಜೆ ಗುರುತು, ಸದ್ದು ?
ಅದೇ ಮಿಕ್ಕರ್ಧದ ನೇರ ಹಾದಿ.

‍ಲೇಖಕರು Admin

September 16, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

    • Nagesha Mysore

      ಕಾಲದೊಂದಿಗೆ ಕಾಲ್ನಡಿಗೆಯಲ್ಲಿ ಕಾಲನನ್ನು ಅಧಿಗಮಿಸಿ ನಡೆಯುವ ಹುನ್ನಾರವೆ ಬದುಕಲ್ಲವೇ ? ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು !

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: