ರಾಜೇಂದ್ರ ಪ್ರಸಾದ್
ಕಲಬುರ್ಗಿಯವರ ಕೊಲೆಯಾಗಿ ಒಂದು ವರುಷವಾಯಿತು.
ಏನು ಹೇಳುವುದು ಎಂದು ಬೆಳಿಗ್ಗೆಯಿಂದ ಯೋಚಿಸುತ್ತಲೇ ಇದ್ದೆ. ಆದರೆ ಹೇಳುವುದಕ್ಕೆ ಏನು ಇಲ್ಲ. ಮಾಡುವುದಕ್ಕೆ ಭಾಳ ಕೆಲಸವಿದೆ ಅನ್ನಿಸಿತು.
ಸಾಧ್ಯವಾದಷ್ಟೂ ಕನ್ನಡ ಶಾಸನಗಳ ಓದು, ಅಧ್ಯಯನ ಮತ್ತು ಪ್ರಸಾರ ಕಾರ್ಯದಲ್ಲಿ ತೊಡಗಿಕೊಳ್ಳುವೆ.
ಹಾ! ಕೊಂದವರಿಗೆ ಶಿಕ್ಷೆಯಾಗಬೇಕು ನಿಜ ಆದರೆ ಕೊಲ್ಲಿಸಿದವರಿಗೆ?
ಅದನ್ನು ಸಂಭ್ರಮಿಸಿದವರಿಗೆ?! ಹುಡುಕುವುದೇನು ಅವರೆಲ್ಲಾ ನಮ್ಮ ಸುತ್ತಲೇ ಇದ್ದಾರೆ!
ಗುರುತಿಸಿದರೂ ನಮ್ಮಲಿ ಪುರಾವೆಗಳಿಲ್ಲ.
ಈ ದುರಿತಕಾಲದಲ್ಲಿ ಶಿಕ್ಷೆಗಿಂತಲೂ ಶಿಕ್ಷಣವೇ ಶಿಕ್ಷಾಮಾರ್ಗ.
ಅರಿವು ಕೂಡ ಪ್ರತಿಭಟನೆಯ ರೂಪ ಪಡೆದುಕೊಳ್ಳಬೇಕು. ಅದರ ದೊಂದಿಗಳನು
ನಾವೆಲ್ಲಾ ಹಿಡಿದುಕೊಳ್ಳಬೇಕು.
0 ಪ್ರತಿಕ್ರಿಯೆಗಳು