ಕೈ (ಹಣೆ) ಬರಹ
-ಸಂದೀಪ್ ಕಾಮತ್
ಮಕ್ಕಳ ಕೈ ಬರಹ ಸುಂದರವಾಗಲೆಂದು ದಿನಾ ಒಂದು ಪುಟ ಕಾಪಿ ಬರೆಯಲು ಕನ್ನಡ ಟೀಚರು ಹೇಳಿದ್ದರು.
ಗುಂಡು ಗುಂಡಗೆ ಬರೆದ ಸುರೇಶನಿಗೆ ಟೀಚರು ಹತ್ತರಲ್ಲಿ ಹತ್ತು ಅಂಕ ನೀಡೋದಲ್ಲದೆ ಲ್ಯಾಕ್ಟೋ ಕಿಂಗ್ ಚಾಕಲೇಟ್ ಬೇರೆ ಕೊಟ್ಟಿದ್ದರು.
ಕಾಗೆ ಕಾಲಿನ ಅಕ್ಷರವಿರುವ ಶ್ರೀಧರನಿಗೆ ಯಥಾ ಪ್ರಕಾರ ಛೀಮಾರಿ ಹಾಕಿದ್ದರು !
ಶ್ರೀಧರ ಈಗ ಅಮೆರಿಕಾದಲ್ಲಿ ಸಾಫ್ಟ್ವೇರ್ ಇಂಜಿನಿಯರ್ .
ಸುರೇಶನಿಗೆ ರಾಜಕಾರಣಿಗಳು ಸುಂದರವಾಗಿ, ಗುಂಡ ಗುಂಡಗೆ ತಮ್ಮ ಪಕ್ಷದ ಬ್ಯಾನರ್ ಬರೆಯುವ ಕೆಲಸ ನೀಡಿದ್ದಾರೆ.





Mr Sudip Kamat,
Your story is not in good taste. Vijayendra