‘ಅಯೋಧ್ಯಾ ಕಾಂಡ’ ಎನರ್ಜಿ ನೋಡಿ ದಂಗು ಬಡಿದಂತಾಗಿದೆ…

ಲೋಕೇಶ್ ಮೊಸಳೆ

ತುಂಬಾ ವರ್ಷಗಳ ನಂತರ ನಾಟಕದ ಚಿತ್ರಗಳನ್ನು ಇತ್ತೀಚಿಗೆ ತೆಗೆದೆ. ನನಗೆ ಒಂಥರಾ ಮಜಾ ಎನ್ನಿಸಿತು. ಹೆಗ್ಗೋಡು ಪ್ರಸನ್ನ ಅವರ ನಿರ್ದೇಶನದಲ್ಲಿ “ಅಯೋಧ್ಯಾ ಕಾಂಡ” ನಾಟಕ ಮೈಸೂರಿನಲ್ಲಿ ತಯಾರಾಗಿದೆ. ಈ ನಾಟಕಕ್ಕೆ ಸಂಗೀತವನ್ನ ಗೆಳೆಯ ಅನುಷ್ ಶೆಟ್ಟಿ. ವಸ್ತ್ರ ವಿನ್ಯಾಸವನ್ನು ರಂಗಾಯಣದ ಹಿರಿಯ ನಟಿ ನಂದಿನಿ ಮಾಡಿದ್ದಾರೆ.

ನಿನ್ನೆ ತಾಂತ್ರಿಕ ಪ್ರದರ್ಶನದ ಶೂಟ್ ಕೂಡ ಮಾಡುತ್ತಲೆ ನಾಟಕದ ಅಭಿನಯ, ಸಂಗೀತ, ಕಲಾವಿದರ ಸಾಮರ್ಥ್ಯ ಅವರ ಎನರ್ಜಿ ನೋಡಿ ನನಗೆ ದಂಗು ಬಡಿದಂತಾಗಿದೆ. ಅಬ್ಬಬ್ಬಾ ಪ್ರಸನ್ನ ಅವರ ನಿರ್ದೇಶನದ ಈ ನಾಟಕ; ನಾಟಕ ಇತಿಹಾಸದಲ್ಲಿ ಹೆಗ್ಗುರುತು ಮೂಡಿಸಲಿದೆ. ಐತಿಹ್ಯ ಮತ್ತು ಸಮಕಾಲೀನ ಸಾಮಾಜಿಕ ರಾಜಕಾರಣ, ಮಹಿಳಾ ದ್ವನಿ ಯನ್ನೆಲ್ಲ ಒಂದೇ ನಾಟಕದಲ್ಲಿ ಭಟ್ಟಿ ಇಳಿಸಿ ಭಾವಾನಾತ್ಮಕವಾಗಿ ದುಗುಡ ಗೊಳಿಸಿ ಅಲ್ಲಾಡಿಸಿರುವ ಪ್ರಸನ್ನ ಅವರು ಪ್ರೇಕ್ಷಕರ ನಿಜವಾದ ನಾಯಕ ರಾಗಿದ್ದಾರೆ. ಇದೆಲ್ಲ ಏನೇ ಇರಲಿ ಮೈಸೂರಿನ ‘ರಂಗರಾಜಕಾರಣ’ಕ್ಕೆ ಈ ನಾಟಕದ ತಯಾರಿ, ಪ್ರದರ್ಶನ, ಹೊಸದೊಂದು ನವೋದಯ ಅನ್ನುವ ನಾಟಕ ರೆಪರ್ಟರಿ, ಹುಟ್ಟಿದೆ.

ನಿಜವಾಗಿ ಅದು ಕಟ್ಟುವ ಕೆಲಸ, ನಾವು ಮಾಡುವ ಕೆಲಸದಲ್ಲಿ ಪರ್ಯಾಯವಾಗಿ ಕೆಲಸ ಮಾಡಿ ಗೆಲ್ಲುವ ಸಾಮರ್ಥ್ಯ ಜಾಣ್ಮೆ ಪ್ರಸನ್ನ ಅವರದ್ದು. ಇದು ತಣ್ಣನೆಯ ಪ್ರತಿಭಟನೆ. ಅಡ್ನಾಡಿಗೆ ಇದೆಲ್ಲ ಅರಿವಾಗುವುದಿಲ್ಲ . ಒಂದೇ ಒಂದು ನಾಟಕ ಮಾಡಿಸುವ ಕಾಯಕ ಗೊತ್ತಿದ್ದರೆ. ಮೈಸೂರಿನ “ರಂಗರಾಜಕಾರಣ” ನಡೆಯುತ್ತಿರಲಿಲ್ಲ, ಇಂಥ ನೀಚತನಗಳಿಗೆ ಮೈಸೂರಿನ ರಂಗಕರ್ಮಿಗಳು ಹೇಗೆ ಪ್ರತಿಕ್ರಿಯಿಸಬೇಕು ಅನ್ನುವಂತೆ ಪ್ರಸನ್ನ ಮೈಸೂರಿನಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ. ಇಂಥ ಕೆಲಸಗಳು ಮೈಸೂರನ್ನು ಜೀವಂತ ಗೊಳಿಸಬಲ್ಲವು…

‍ಲೇಖಕರು Admin

May 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: