ಅಮರೇಂದ್ರ ಹೊಲ್ಲಂಬಳ್ಳಿ ಅನುವಾದಿತ ಕವಿತೆ- ಭಯ…

ಮೂಲ: ಖಲೀಲ್ ಗಿಬ್ರಾನ್

 ಕನ್ನಡಕ್ಕೆ : ಡಾ ಅಮರೇಂದ್ರ ಹೊಲ್ಲಂಬಳ್ಳಿ

ಕಡಲನ್ನು ಪ್ರವೇಶಿಸುವ ಮೊದಲು
ನದಿ ಭಯದಿಂದ ನಡುಗಿತು
ಎನ್ನುವ ಮಾತಿದೆ.

ಪರ್ವತ ಶಿಖರಗಳಿಂದ ಬಂದವಳು ಆಕೆ.
ಉದ್ದನೆಯ ಅಂಕುಡೊಂಕಾದ ರಸ್ತೆ ತಿರುವುಗಳನ್ನು,
ಕಾಡುಗಳನ್ನು, ಹಳ್ಳಿಗಳನ್ನು ಹಾದು ಬಂದವಳು ಆಕೆ.
ತಾನು ಪಯಣಿಸಿದ ದಾರಿಯೆಡೆಗೆ ಒಮ್ಮೆ
ಹಿಂದಿರುಗಿ ನೋಡುತ್ತಾಳೆ.

ತನ್ನೆದುರು ಆಕೆ
ಅನಂತ ವಿಸ್ತಾರದ ಕಡಲನ್ನು ನೋಡುತ್ತಾಳೆ.
ಅದರೊಳ ಹೊಕ್ಕರೆ ಶಾಶ್ವತವಾಗಿ
ಕಣ್ಮರೆಯಾಗುವುದರ ಹೊರತು ಬೇರೇನೂ ಇಲ್ಲ ಎನಿಸುತ್ತದೆ.

ಆದರೆ ಬೇರೆ ದಾರಿಯಿಲ್ಲ.
ನದಿ ಹಿಂದಿರುಗಲಾಗುವುದಿಲ್ಲ.

ಯಾರೂ ಹಿಂದೆ ಹೋಗಲಾಗುವುದಿಲ್ಲ,
ಈ ಅಸ್ತಿತ್ವದಲ್ಲಿ ಹಿಮ್ಮುಖ ಚಲನೆ ಅಸಾಧ್ಯ.

ಕಡಲನ್ನು ಪ್ರವೇಶಿಸುವ ಅಪಾಯಕ್ಕೆ
ನದಿ ಎದೆಯೊಡ್ಡಲೇಬೇಕಾಗಿದೆ.
ಏಕೆಂದರೆ, ಆಗ ಮಾತ್ರ ಭಯ ಇಲ್ಲವಾಗುತ್ತದೆ.
ಕಡಲನ್ನು ಪ್ರವೇಶಿಸುವುದು ಎಂದರೆ,
ಕಡಲೊಳಗೆ ಕಾಣೆಯಾಗುವುದಲ್ಲ.
ತಾನು ಕಡಲೇ ಆಗುವುದು
ಎಂದು ನದಿಗೆ ಅಲ್ಲಿ ಅರ್ಥವಾಗುತ್ತದೆ.

‍ಲೇಖಕರು Admin

December 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: