ಅಭಿನವ ಸದಾ ಚಟುವಟಿಕೆಯ ಬಿಂದು. ಒಂದಲ್ಲಾ ಒಂದು ಪುಸ್ತಕ, ಒಂದಲ್ಲಾ ಒಂದು ಚಟುವಟಿಕೆ..
ಚಿತ್ರದುರ್ಗ ಸಮ್ಮೇಳನ ಆರಂಭವಾಗುವ ಮುನ್ನವೇ ಬೆಳಗೆರೆ ಕೃಷ್ಣ ಶಾಸ್ತ್ರಿಗಳ ಕೃತಿ ಸಿದ್ಧಪಡಿಸಿ ಚಳ್ಳಕೆರೆಯಲ್ಲಿ, ಯು ಆರ್ ಅನಂತಮೂರ್ತಿ ಅವರು ಯೇಟ್ಸ್ ಬಗ್ಗೆ ಬರೆದಿರುವ ಕೃತಿಯನ್ನು ಚಿತ್ರದುರ್ಗದಲ್ಲಿ ಬಿಡುಗಡೆ ಮಾಡಿದ್ದಾರೆ. ಇದಲ್ಲದೇ ಕೆ ಪಿ ಸುರೇಶ್ ಅನುವಾದಿಸಿರುವ ಓದಲೇಬೇಕಾದ ಕಾದಂಬರಿ ಕೊಸಾವೋ ಸಹಾ ಸಿದ್ಧವಾಗಿದೆ.
ಕೆಲ ದಿನಗಳ ಮುನ್ನವಷ್ಟೇ ಮಲ್ಲಿಕಾರ್ಜುನ ಮನ್ಸೂರರ ಆತ್ಮಚರಿತ್ರೆ ‘ನನ್ನ ರಸಯಾತ್ರೆ’ ಎರಡನೇ ಆವೃತ್ತಿ ಸಿದ್ಧಪಡಿಸಿದ್ದರು. ಈ ಎಲ್ಲಾ ಕೃತಿಗಳೂ ಅಭಿನವದ ಮಳಿಗೆ 561 ರಲ್ಲಿ ಲಭ್ಯ.
ಕೂತಲ್ಲಿಯೇ ಸಾಹಿತ್ಯ ಸಮ್ಮೇಳನದ ಆನಂದ ಸವಿಯಲು ಅವಕಾಶ ಮಾಡಿಕೊಟ್ಟ ’ಮೇ ಫ್ಲವರ್ ಬಳಗಕ್ಕೆ …….
ಜೈ!