ಅತ್ತವರರಾರಿಲ್ಲಿ? ತಿಳಿಯುತ್ತಿಲ್ಲ..

ಅಸ್ಸಾಮಿ ಕವಿ ನಿಲಿಂ ಕುಮಾರ್ ಹೊಟ್ಟೆಯಲ್ಲಿ ಬೆಂಕಿ ಇಟ್ಟುಕೊಂಡವನು. ಬರೆದರೆ ಸಾಕು ಅನುಗಾಲವೂ ಅವನದ್ದೇ ಚಿಂತೆ ಎನ್ನುವಷ್ಟು ಆವರಿಸಿಕೊಳ್ಳುತ್ತಾನೆ

ಎಚ್ ಎನ್ ಆರತಿ ಈಗಾಗಲೇ ನಿಲಿಂ ಕವಿತೆಗಳನ್ನು ಕನ್ನಡದ ಓದುಗರಿಗೆ ಮೊಗೆದು ಕೊಟ್ಟಿದ್ದಾರೆ.

ಆತನ ಭಾವವನ್ನು ಕನ್ನಡದ ಚೌಕಟ್ಟಿಗೆ ಸರಿಯಾಗಿ ಕೂರಿಸುವ ಆರತಿ ಸಧ್ಯದಲ್ಲೇ ಈತನ ಕವಿತಾ ಸಂಕಲನದೊಂದಿಗೆ ನಮ್ಮೆದುರು ನಿಲ್ಲಲಿದ್ದಾರೆ

ಇಲ್ಲಿದೆ ಮತ್ತೊಂದು ನಿಲಿಂ ಪದ್ಯ…

ಭಾವಾನುವಾದ : ಆರತಿ.ಎಚ್.ಎನ್.

ತಿನ್ನಲಾಗದೇ, ನಾನಿಂದು
ಊಟ ಬಿಟ್ಟೆ!
ಅಪಾರ ಸಂಕಟದಿಂದ
ಹೊಟ್ಟೆ ತುಂಬಿದೆ.
ಖುಷಿಯಿಂದ ನಗುವ ವೇಷ ಧರಿಸಿ,
ಒಳಗೆ ದುಃಖ ಉಮ್ಮಳಿಸಿ
ಅತ್ತವರರಾರಿಲ್ಲಿ? ತಿಳಿಯುತ್ತಿಲ್ಲ.

ಅಳು, ನಗು ಬಾರದ
ಯಾರಾದರೂ
ಪರಿಚಿತರಿದ್ದಾರೆಯೇ?
ಇದ್ದರೆ, ಅಂತವರು
ನನ್ನ ಕೈಲಿ ಆತ್ಮಹತ್ಯೆಯ
ಚೀಟಿ ತುರುಕಲು ಅರ್ಹರು!

ಆ ರಕ್ತಸಿಕ್ತ ಕೈಗಳನ್ನುಜ್ಜಿ,
ಬೆರಳು ತಿಕ್ಕಿ ತೊಳೆದು,
ಅಡುಗೆ ಯಾರೇ ಮಾಡಿರಲಿ,
ಅದು ಲೋಕದ ಅತ್ಯಂತ ಹೊಲಸು ಹಸಿವಿಗೋಸ್ಕರ!

ಅಣಕವೇನೆಂದರೆ,
ಕಾಡುವ ಹಸಿವು
ಯಾರದೋ ಹೊಟ್ಟೆಯಲ್ಲಿದೆ,
ಕಬಳಿಸಲು ಊಟ ಇನ್ಯಾರದ್ದೋ ತಟ್ಟೆಯಲ್ಲಿ!

ಇವತ್ತು ನನಗೆ
ಊಟ ಸೇರಲಿಲ್ಲ,
ನಡು ಮಧ್ಯಾಹ್ನವೊಂದು
ವಕ್ರವಾಗಿ ನಗುತ್ತಾ
ನನ್ನನ್ನು ದಾಟಿ ಹೀಗೇ
ಮುಂದೆ ಹೋಯಿತು…

 

‍ಲೇಖಕರು avadhi

December 16, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. H S Eswara

    ಅಣಕವೇನೆಂದರೆ,
    ಕಾಡುವ ಹಸಿವು
    ಯಾರದೋ ಹೊಟ್ಟೆಯಲ್ಲಿದೆ,
    ಕಬಳಿಸಲು ಊಟ ಇನ್ಯಾರದ್ದೋ ತಟ್ಟೆಯಲ್ಲಿ! How true? Why so? These questions have bothered me over the years and I am yet to find an answer. HS Eswara

    ಪ್ರತಿಕ್ರಿಯೆ
  2. ಮಮತ

    ಅಪಾರ ಸಂಕಟದಿಂದ ಹೊಟ್ಟೆ ತುಂಬಿದೆ.
    ಅತ್ತವರಾರೆಂದು ತಿಳಿಯುತ್ತಿಲ್ಲ …

    ತೀವ್ರ ಅನುಭೂತಿ ಮೂಡಿಸುವ ಪದ್ಯ..
    ಆರತಿ ಮೇಡಂರ ಸಶಕ್ತ ಅನುವಾದ …

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: