ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಕ್ಷರ ರಾಜಕೀಯ ಕೆಲಸಮಾಡುವುದು ಹೇಗೆ…?

rajaram tallur

ರಾಜಾರಾಂ ತಲ್ಲೂರ್ 

kudmul rangaraoನಮ್ಮ ನಾಡು-ನುಡಿಗಳನ್ನು ಸಾಂಸ್ಕ್ರತಿಕವಾಗಿ “ಶುದ್ಧೀಕರಿಸಿ” ಶ್ರೀಮಂತ ಗೊಳಿಸುವುದು ಹೀಗೆ!!!!

ಕುದ್ಮಲ್ ರಂಗರಾಯರ ಸಮಾಧಿಯ ಮೇಲಿರುವ ಈ ಹೇಳಿಕೆಗಾಗಿ ಹುಡುಕುತ್ತಿದ್ದೆ.
“ ನನ್ನ ಶಾಲೆಯಲ್ಲಿ ಕಲಿತ ಒಬ್ಬ ದಲಿತ ಜನಾಂಗದ ಹುಡುಗ ಸರ್ಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಯಲ್ಲಿ ಕಾರಿನಲ್ಲಿ ಓಡಾಡಬೇಕು. ಆಗ ಎದ್ದ ಧೂಳು ನನ್ನ ತಲೆಗೆ ತಾಗಿದರೆ ನನ್ನ ಜನ್ಮ ಸಾರ್ಥಕ – ಕುದ್ಮಲ್ ರಂಗರಾವ್”

ಸರ್ಕಾರಿ ಅಂತರಜಾಲ ಕನ್ನಡ ಜ್ಞಾನಕೋಶ “ ಕಣಜ” ದಲ್ಲಿ ಈ ಹೇಳಿಕೆಯನ್ನು “ ಶುದ್ಧೀಕರಿಸಿ” ರೂಪಾಂತರಿಸಿರುವುದು ಹೀಗೆ:
“ನಾನು ಸ್ಥಾಪಿಸಿದ ಶಾಲೆಯಲ್ಲಿ ಕಲಿತವರಲ್ಲಿ ಒಬ್ಬರಾದರೂ ಪದವೀಧರರಾಗಬೇಕು. ನನ್ನ ವಿದ್ಯಾಸಂಸ್ಥೆ ಯಲ್ಲಿ ವಿದ್ಯಾದಾನ ಪಡೆದ ಅವರು ಜೀವನದಲ್ಲಿ ಉನ್ನತಿಯನ್ನು ಪಡೆದು ಸ್ವಂತ ಕಾರಿನಲ್ಲಿ ಹೋಗುವಾಗ ಆ ಕಾರಿನ ಧೂಳನ್ನು ನಾನು ಕಾಣಬೇಕು” ಎಂದು ಅವರು ಅನ್ನುತ್ತಿದ್ದರು.

(https://kanaja.in/archives/16967)

kudmul rangarao samadhi

‍ಲೇಖಕರು Admin

1 February, 2016

2 Comments

  1. Gn Nagaraj

    ಅಹಾ ! ಜಾತೀಯ ಮನಸ್ಸುಗಳು ಹೇಗೆಲ್ಲಾ,ಎಲ್ಲೆಲ್ಲಾ ಕೆಲಸ ಮಾಡುತ್ತದೆ !

  2. Kavyashree H

    “ ನನ್ನ ಶಾಲೆಯಲ್ಲಿ ಕಲಿತ ಒಬ್ಬ ದಲಿತ ಜನಾಂಗದ ಮಕ್ಕಳು ವಿದ್ಯಾವಂತರಾಗಿ, ದೊಡ್ಡವರಾಗಿ ಸರ್ಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಯಲ್ಲಿ ಕಾರಿನಲ್ಲಿ ಓಡಾಡಬೇಕು. ಆಗ ರಸ್ತೆಯಲ್ಲಿ ಏಳುವ ಧೂಳು ನನ್ನ ತಲೆಗೆ ತಾಗಬೇಕು ಆಗ ನನ್ನ ಜನ್ಮ ಸಾರ್ಥಕ ವಾಗುತ್ತದೆ– ಕುದ್ಮಲ್ ರಂಗರಾವ್”.
    ಪ್ರಥಮ ಪಿಯುಸಿ ಕನ್ನಡ ಪಠ್ಯಪುಸ್ತಕದಲ್ಲಿರುವ ಪಾಠದಲ್ಲಿ ಈ ಮೇಲಿನಂತೆ ಸರಿಯಾಗಿದೆ .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading