ಅಂಬರದಿಂದ ಕ್ಯಾನ್ವಾಸ್ ಗೆ..

ಪ್ರತೀಕ್ಷಾ ಮರಕಿಣಿ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಎರಡನೇ ಪಿ ಯು ವಿದ್ಯಾರ್ಥಿನಿ. ದಕ್ಷಿಣ ಕನ್ನಡದ ತನ್ನ ಊರಿನ ಪ್ರಕೃತಿ ಮನಕ್ಕೆ ಇಳಿದದ್ದು ಹೇಗೆ ಕ್ಯಾನ್ವಾಸ್ ಗೂ ಇಳಿಯಿತು ಎನ್ನುವುದನ್ನು ಬರೆದಿದ್ದಾಳೆ. ವಿಶ್ವ ಪರಿಸರ ದಿನಕ್ಕಾಗಿ-

ಪ್ರತೀಕ್ಷಾ ಮರಕಿಣಿ

‘ವಿಶ್ವ ಪರಿಸರ ದಿನ’ದ ಬಗ್ಗೆ ಯೋಚಿಸಿದೊಡನೆ ಪ್ರಕೃತಿಯ ಬಗ್ಗೆ ಏನಾದರೂ ಚಿತ್ರ ಬರೆಯಬೇಕೆಂದು ಅನಿಸಿತು. ಪರಿಸರ ಅಂದೊಡನೆ ಮೊದಲು ನೆನಪಾಗುವುದು ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ನನ್ನ ಊರು.

ಚಿತ್ರ ಬರೆಯಲೆಂದೇ ನಾನು, ಊರಿಗೆ ಹೋಗಿದ್ದಾಗ ಸ್ವತಃ ತೆಗೆದ ಕೆಲವು ಫೊಟೋಗಳನ್ನು ಹುಡುಕಿದೆ. ನಮ್ಮ ಮನೆಯ ಅಡಿಕೆ ತೋಟದ ಈ ನಿರ್ಧಿಷ್ಟ ಚಿತ್ರ ನನ್ನ ಕಣ್ಸೆಳೆಯಿತು.

ದೂರದಿಂದ ಅಡಿಕೆ ತೋಟವನ್ನು ನೋಡುವುದು ಒಂದಾದರೆ, ತೋಟದ ಮಧ್ಯದಲ್ಲಿ ನಿಂತು ನೋಡುವುದರಲ್ಲಿ ಸಿಗುವ ರೋಮಾಂಚನವೇ ಬೇರೆ!

ಮರದ ಬುಡ, ಅಡಿಕೆ ಸೋಗೆ ಸೇರಿದಂತೆ ಆಕಾಶತ್ತರಕ್ಕೂ ದೃಷ್ಠಿ ಹೋಗುವುದು ಅಪರೂಪದ ಅನುಭವವೇ ಸರಿ!

ಹೀಗೆ ನಾನು ಈ ಚಿತ್ರದ Painting ಮಾಡಲು ಆರಂಭಿಸಿದೆ ( acrylic paint on paper) ನಾನು ಬರೆಯುವ ಚಿತ್ರ ಹೇಗೆ ಮೂಡಿ ಬರುತ್ತದೆಯೋ, ಜೊತೆಗೆ ನಾನು ಅದನ್ನು ‘ವಿಶ್ವ ಪರಿಸರ ದಿನ’, ಜೂನ್ 5ರ ಒಳಗೆ ಪೂರ್ಣಗೊಳಿಸಲು ಸಾಧ್ಯವೇ ಎಂಬ ಸಾಕಷ್ಟು ಗೊಂದಲಗಳು ನನ್ನೊಳಗಿದ್ದವು. Painting ಮುಗಿಸಿ ನೋಡಿದಾಗ ಅದು, ನಾನು ತೆಗೆದ ಫೋಟೊದಂತೆಯೇ ಮೂಡಿಬಂದಿರುವುದನ್ನು ನೋಡಿ ಬಹಳ ಸಂತೋಷಪಟ್ಟೆ. 

ಮಾನವನಿಗೆ ಆಕಾಶವೇ ಮಿತಿ. ಆದರೆ ಅವನ ಸ್ವಾರ್ಥಸ್ವಭಾವ ಸದಾ ಪರಿಸರವನ್ನು ಇಂದಿಗೂ ನಾಶಗೊಳಿಸುತ್ತಲೇ ಇದೆ. ನಮ್ಮ ಪೂರ್ವಜರಿಂದ ನಮಗೆ ದೊರಕಿದ ಪ್ರಕೃತಿ ಹಾಗೂ ಭೂಮಿಯನ್ನಾದರೂ ನಾವು ನಮ್ಮ ಮುಂದಿನ ಪೀಳಿಗೆಗಾಗಿ ಕಾಪಾಡಬೇಕಲ್ಲವೇ?

‍ಲೇಖಕರು Avadhi

June 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: