ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಹೊತ್ತಿ ಉರಿದ ಬೂದಿಯಿಂದೆದ್ದು ಬರುವವರಲ್ಲಿ…’ ವಸುಧಾ ಕವಿತೆ

‘ಆಳದೊಳಗಣ ಅರಿವು’

– ವಸುಧಾ ರವೀಂದ್ರ


ಹಿರಿಮೆ ಹೆಗ್ಗಳಿಕೆ;
ಒಡಲು ಕೆಂಡದ ಮಳಿಗೆ;
ಇದಿರು ಮುಗ್ದತೆಯ ಪರದೆ.
 
ನೆರೆಮನೆಗೆ
ಕಿಚ್ಚ ತಗುಲಿಸಿ ಹರಿವ,
ಹರ್ಶದ ಹೊಳೆ.
 
ಇದ್ದರು ಕಾಣದದು
ಕಿಸುರು ಕೆಸರಿನ
ಮಡಕೆ.
 
ಮುಚ್ಚಿ ಮಚ್ಚಳ
ಮೇಲೆ ತತ್ವ ಶಾಸ್ತ್ರಗಳ,
ಹೊದಿಕೆ.
 
ತಣ್ಣಗಿನ ಜಲ
ಆವಿಯಾಗುವುದದರ,
ಶಾಖಕ್ಕೆ.
 
ಹೊತ್ತಿ ಉರಿದ
ಬೂದಿಯಿಂದೆದ್ದು ಬರುವವರಲ್ಲಿ,
ಹಚ್ಚ ಹಸಿರಿನ ಕಳೆ.
 
ಸಾವು ತಟ್ಟಿದೊಡೆನಾಳೆ,
ಸುರಿವುದು
ಅರಿವಿನಾ ಮಳೆ.
 

‍ಲೇಖಕರು G

11 September, 2014

2 Comments

  1. mmshaik

    arthagarbhita..nice..

  2. vasudev nadig

    artha aglilla.enannu helhalu horatidare antha.really

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading