ಗಾಂಧಿ

ಸವಿತಾ ನಾಗಭೂಷಣ
ಇಲ್ಲವೆಂದರೂ
ಇಲ್ಲವಾಗುವುದೇ?
ನೆನಪು-
ಹುಲ್ಲು ಗರಿಕೆಯಂತೆ
ಹಸಿರಾಗಿದೆ
ಆ ಚಿತ್ರ ಅವನದೇ
ಮಳೆಬಿಲ್ಲಿನಂತೆ
ಭರತ ಖಂಡದ ಮೇಲೆ ಬಾಗಿದೆ
ತಂಗಾಳಿ ಅದನು ತೂಗಿದೆ
ಕಣ್ಣೊಳಗಿನ ಮಿಂಚು
ಭೂಮಂಡಲವ ಬೆಳಗಿದೆ
ನಿಸ್ವಾರ್ಥ ನಗೆ
ಮೂಲೆ ಮೂಲೆಯನೂ ತಾಕಿದೆ
ಸರಕು ಸಂತೆಯಲಿ
ಗೌಜು ಗದ್ದಲದಲಿ
ತುಸು ನೂಲ
ತಾನೇ ನೂಲುತಿದೆ ಚರಕ
‘ಅರಿವೆ’ ಅರಿವೆಂಬ ರೂಪಕ
ಅಳಿಸಲಾಗದು ಅಚ್ಚೊತ್ತಿದಂತಿದೆ
ಅಷ್ಟು ಸುಲಭವಾಗಿ
ಆರದು
ಅವನು ಹಚ್ಚಿದ ದೀವಿಗೆ





ದೀವಿಗೆಯನ್ನುಆರಿಸಲುಸನ್ನಾಹಗಳುನಡೆಯುತ್ತಿರುವುದುನಿಜ
ದೀವಿಗೆಯನ್ನು ಆರಿಸಿದ ಮೇಲೆ ಕತ್ತಲಲ್ಲಿ ಕುರುಡರಾಗುವವರು ನಾವೇ ಎಂದು ನಮಗಿನ್ನೂ ಅರ್ಥವಾಗಿಲ್ಲ.