ಎಸ್ ಕೆ ಮಂಜುನಾಥ್
ಅಲ್ಲಮನ ಬಯಲಲ್ಲಿ
ಬಕಾಲನ ಬಳಿಯಲ್ಲಿ
ಗಲ್ಲೆಬಾನಿ ನೀರಿನಲ್ಲಿ
ದಕ್ಲಾದೇವಿ ಕತೆಯ ಹೇಳಿ
ಮರಳಿ ಬರದ ಮನೆಯ ಕಡೆಗೆ
ಹೀಗೆ ಹೊರಟು ಬಿಡುವುದೇ..?
ಬಯಲಲ್ಲಿ ಬಯಲಾಗಿ
ಬೆಳಕಲ್ಲಿ ಬೆಳಕಾಗಿ
ನೀರಲ್ಲಿ ನೀರಾಗಿ
ಹರಿದು ಹರಿದು ಕಾಲಬುಡಕೆ
ಇಳಿದು ಇಳಿದು ನೆಲದ ಎದೆಗೆ
ಹುಳಿರಂಪಿಗೆ ಚಮ್ಮಾಳಿಗೆಯ
ಕಣ್ಣತೇವ ಕಾಣುವಾಗ
ಹೀಗೆ ಹೊರಟು ಬಿಡುವುದೇ..?
ಈ ನಾಡ ಮಣ್ಣಿನ
ಕಣ್ಣೀರಿನ ಕತೆಯ ಹೇಳಿ
ಜಗದ ಕಣ್ಣು ತೆರೆಸಿದಾತ
ಸೋದರರ ಕಣ್ಣನು ತೆರೆಸಲಾಗಲಿಲ್ಲ
ಅಂತ ಕೊರಗಿದಾತ
ಅವರು ಕಣ್ಣು ಬಿಡುವ ಸಮಯದಲ್ಲೇ
ಹೀಗೆ ಹೊರಟು ಬಿಡುವುದೇ..?






0 Comments