ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾಲು ಕೊಡುವ ಎಮ್ಮೆಗೆ ದೆವ್ವದ ಸ್ಥಾನ ಕಲ್ಪಿಸುತ್ತೇವೆ..

ನಮ್ಮೊಳಗಿನ ವಿಲಕ್ಷಣ ಭಯ…

ವೈ ಬಿ ಹಾಲಬಾವಿ

ನಮ್ಮೊಂದಿಗೆ ವಾಸಿಸುವ ಎಲ್ಲವೂ ನಮ್ಮೊಳಗಿವೆ

ಒಂದೊಂದು ಆಕಾರ ಹೆಸರಿಸುತ್ತೇವೆ ಒಂದೊಂದಕ್ಕೆ
 
ಅತ್ತಿತ್ತ ಸುಳಿದಾಡಿದರೆ ಬೆಕ್ಕಿಗೆ ಅಪಶಕುನದ ಪಟ್ಟ ಕಟ್ಟುತ್ತೇವೆ
ನಮ್ಮೊಳಗಿನ ಸಂಶಯಕ್ಕೆ ಮೂರ್ತ ರೂಪ ಕೊಟ್ಟು…
 
ಮುಕ್ಕೋಟಿ ದೇವತೆಗಳನ್ನು ಹಸುವಿನಲ್ಲಿ ಅವತರಿಸಿ
ಪೂಜಿಸುವ ನಾವು ಪಕ್ಕದಲ್ಲೇ ಇದ್ದು ಬಹುಪಾಲು
ಹಾಲು ಕೊಡುವ ಎಮ್ಮೆಗೆ ದೆವ್ವದ ಸ್ಥಾನ ಕಲ್ಪಿಸುತ್ತೇವೆ
ಮುದಿಯಾದರೆ ಪೂಜಿಸಿಕೊಂಡ ಆಕಳು ಎತ್ತುಗಳನ್ನೇ
ನಿರ್ದಯವಾಗಿ ಅಟ್ಟುತ್ತೇವೆ ಕಸಾಯಿಖಾನೆಗೆ…
 
ನಿಯತ್ತಿನ ನಾಯಿ, ಭಾರ ಹೊರುವ ಕತ್ತೆ
ಪ್ರಾಮಾಣಿಕತೆಗೆ ಹೆಸರಾದರೂ ನಮ್ಮೊಳಗಿನ ವಿಲಕ್ಷಣ ಖುಷಿಗೆ
ಬಯ್ಗುಳದ ಪದಗಳಾಗಿ ಸದಾ ಹಿಯಾಳಿಸುತ್ತೇವೆ ಅವುಗಳನ್ನು…

 

ಇದ್ದಾಗ ತಾಯಿ-ತಂದೆಯರನ್ನು ಸರಿಯಾಗಿ ನೋಡದ ನಾವು
ಸತ್ತಾಗ ಅಶ್ರುತರ್ಪಣಗೈದು ಅವರಿಗಾಗಿ ಇಟ್ಟ ಪಿಂಡವನ್ನು
ಕಾಗೆ ಮುಟ್ಟಿದರೆ ಕೃತಾರ್ಥರಾಗುತ್ತೇವೆ
ಒಂದಗುಳ ಕಂಡರೆ ತನ್ನ ಬಳಗವ ಕೂಗಿ ಕರೆದು
ತಿನ್ನುವ ಅದರ ಗುಣವ ಮರೆತು
ಭೀಕರ, ಭಯಾನಕತೆಗೆ ರೂಪಕವಾಗಿಸುತ್ತೇವೆ…
 
ಹೀಗೆ…ಕಾಗೆ, ಗೂಬೆ, ಬೆಕ್ಕು, ಹಲ್ಲಿ ನಮ್ಮೊಳಗಿನ ಭಯಕ್ಕೆ
ವಿಲಕ್ಷಣ ರೂಪ ಪಡೆದು ಅಪಶಕುನದ ಪ್ರತಿಮೆಗಳಾಗುತ್ತವೆ
ಹುಣ್ಣಿಮೆಯ ಬೆಳದಿಂಗಳೂ, ಅಮವಾಸೆಯ ಕತ್ತಲೂ
ಮಂತ್ರ ತಂತ್ರದ ವಶಕ್ಕೆ ಮೂಹೂರ್ತಗಳಾಗುತ್ತವೆ
ಉಣ್ಣುವ ಅನ್ನ, ಹಣ್ಣು-ಹಂಪಲ, ಅರಿಸಿಣ, ಕುಂಕುಮವೂ
ಹುಸಿ ಮಂತ್ರ ತಂತ್ರದ ಸರಕುಗಳಾಗಿ ವಿಲಕ್ಷಣ ಭಯ ಹುಟ್ಟಿಸುತ್ತವೆ…!!
 

‍ಲೇಖಕರು avadhi

19 April, 2014

1 Comment

  1. dhanaraj patre

    thumba chennagi helidira sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading