ರಾಘವೇಂದ್ರ ಹೆಗಡೆ
ಅರಳಿ ಬಂದ ನಗುವ ಹಿಂದೆ
ಅಡಗಿ ನಿಂತ ನೋವ ದನಿಯು
ನೆನಪ ಪುಟದ ಸಾಲಿಗೆರಗಿ
ಒತ್ತಿ ಬರುವ ಮೌನ ದನಿಯು .,
ಶಬ್ದವಾಗಿ ಪದವ ಮರೆತು
ಮಾತನಾಡ ಹೊರಟಿದೆ
ಅದೇನ ಕುರಿತು..?
ಕೇಳುತಿದೆ ಮೌನವಾಗಿಯೇ
ಭಾವಕಿಲ್ಲವೇ ಬೆಲೆ ಒಂದಿನಿತು..?!
———————-
ತಲೆದೂಗಿದೆ ಮರ
ನಿತ್ಯ ಜೀವ ಕೊಡುವ
ನೇಸರನ ಶೃದ್ಧೆಗೆ,
ಆದರೆ ಆ ಮರದ
ತಲೆ ಉರುಳಿಸಲು
ಹವಣಿಸುತಿಹೆವಲ್ಲ ನಾವು..!
ಅದೇನು ಕವಿದಿದೆ ನಮ್ಮ ಬುದ್ದಿಗೆ..?!
———————–
ನಿಲ್ಲದ ಕನವರಿಕೆಗೆ
ಉಸಿರು ಸೇರಿ
ಮುಗಿಯದ ಕಥೆಯ ನಡುವೆ
ಹೆಸರು ಬರೆದು
ಹಬ್ಬಿದ ಮಬ್ಬು
ಸಾಲಿನ ಕಿಟಕಿಯಲಿ
ಬೆಳಕ ಕಿಡಿಯನು
ಇಣುಕಿ ಅರಸಿ..
ಕಾಣಲಾರೆನಾ ಎಂಬ
ಕೊಂಚ ದಿಗಿಲ
ಗೊಂದಲದೊಡೆ ಬೆರೆಸಿ
ಮಾನವ ಕದಡುತ
ಒದ್ದೆಯಾದ ಹನಿ
ಕೊಚ್ಚಿ ಹೋಗಿದೆ ಈಗ
ಹನಿಯೊಡೆದ ಮಳೆಯಲಿ..!






0 Comments