ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಪ್ತೋಷ್ಣ

 ನಾಗರಾಜ್ ರೋಣೂರು 


ಐಸ್ ಕ್ಯಾಂಡಿ
ಘಂಟೆಯ ಟಣ್ ಟಣ್
ನಾದವು
ಮಧುರಾತಿ ಮಧುರ
ನೆನಪುಗಳ
ಮಂಜುಗಡ್ಡೆ.
ಒಂದನಿಯೂ
ಕರಗದಂತೆ
ಸಂರಕ್ಷಿಸಿದ
ಭಿನ್ನ – ಭಿನ್ನ
ಪರಿಮಳಗಳು.


ಅವು ಕಡ್ಡಿಗೆ
ಸಿಕ್ಕಿಸಿದ ಒಡನಾಡಿಗಳಂಗೆ
ಅಂಕೆ – ಸಂಖೆಯಿಲ್ಲದ
ಸವಿ – ಸವಿ
ಒಡನಾಟದ
ಬಣ್ಣ ಬಣ್ಣದ
ಕ್ಯಾಂಡಿಗಳ
ಹೊದಿಕೆಗಳು.

ಇಂದು
ಉತ್ಕಟ ಪ್ರೀತಿಯ
ನಿರೀಕ್ಷೆಯಲಿ
ಒಂದೊಂದಾಗಿ ಆ ಹೊದಿಕೆಗಳನು ಬಿಚ್ಚಲು
ಜತನದಿಂದ ಕುಳಿತೆ…
ಆದದ್ದೇನು
ಅಲ್ಲಿರುವುದು
ಕರಗಿಹೋದ ಅವ್ಯಕ್ತ
ಸಿಹಿ ರೇಖೆಗಗಳು ಮಾತ್ರ.

ಕಾರಣ
ಪದ್ಯದ ಶೀರ್ಷಿಕೆಯೇ..!

 

‍ಲೇಖಕರು Avadhi Admin

12 April, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading