ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾವಿಗೆ ಸೌದೆ ಹೊರಿಸಿದ ತಾತ..

 

– ಲಿಯೋ ಟಾಲ್ ಸ್ಟಾಯ್

ಎಲ್ಸಿ ನಾಗರಾಜ್ ಹೇಳಿದಂತೆ-

 

ಒಂದು ಹೊರೆ ಸೌದೆ ಕಡಿದ ತಾತ ಅದನ್ನ ಹೊತ್ತು ಮನೆಯ ದಾರಿ ಹಿಡಿದ. ಮನೆಯ ದಾರಿ ತುಂಬಾ ದೂರವಿತ್ತು , ತಾತನಿಗೆ ದಣಿವಾಯಿತು.

ಸೌದೆ ಹೊರೆಯನ್ನ ಕೆಳಗಿಟ್ಟ ತಾತ ” ನನಗೆ ಸಾವಾದರೂ ಬರಬಾರದಾ ! ‘ ಅಂತಾ ಗೊಣಗಿದ

ತಾತನ ಮುಂದೆ ಬಂದು ನಿಂತ ಸಾವು ‘ ನನ್ನಿಂದ ಏನಾಗಬೇಕಿತ್ತು !? ‘ ಅಂತಾ ಕೇಳಿತು

ತಾತ ಧೈರ್ಯದಿಂದ ಎದ್ದು ನಿಂತು ‘ ನನ್ನ ಸೌದೆ ಹೊರೆ ಹೊತ್ತು ನನ್ನ ಮನೆಗೆ ನಡೆ ‘ ಎಂದ

~ ~ ~ ‌‌ ~ ~

( ಜೀತಗಾರರ ಮಕ್ಕಳಿಗೆ ಅಕ್ಷರ ಕಲಿಸುತ್ತಾ ಹೇಳಿದ ಕತೆ )

‍ಲೇಖಕರು avadhi

16 December, 2017

1 Comment

  1. ರಘುನಾಥ

    ಚಂದ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading