ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಕ್ಷಿಯನ್ನು ಕಟಕಟೆಯಲ್ಲಿ ನಿಲ್ಲಿಸಲಾರೆ…

ಎಚ್ ಆರ್ ರಮೇಶ 

ಮತ್ತೆ ನೆನಪಾಗುವೆ
ಕಾಲ ಸ್ತಬ್ಧವಾಗುವುದು
ಖಂಡಿತ ಗೋರಿಗಳನ್ನು ಬಗೆದು
ಇತಿಹಾಸವನ್ನು ವಾಸ್ತವದಲ್ಲಿ ನೇತುಹಾಕಿರುವುದನ್ನು
ಕಂಡಿರುವೆ
ಆದರೂ ಹೋಗಿದ್ದು
ಈಗಷ್ಟೇ ಬಿರಿಯುತ್ತಿರುವ ಮೊಗ್ಗು
ಆಕಸ್ಮಿಕದ ಬದುಕಲ್ಲಿ
ನಡೆದದ್ದು ನಡೆಯಬೇಕಿತ್ತೆಂಬಂತೆ ನಡೆದಿದೆ
ಕಾಲಕ್ಕೆ ನೆನಪಿನ ಹಂಗಿಲ್ಲ
ನಿಜ
ಆದರೆ
ನಡೆದದ್ದಕ್ಕೆ ಸಾಕ್ಷಿಯನ್ನು ಕಟಕಟೆಯಲ್ಲಿ ನಿಲ್ಲಿಸಲಾರೆ.
ರಕ್ತ ಮಾಂಸದ ಎದೆಯಲ್ಲಿ ಕರಗಿದೆ

‍ಲೇಖಕರು Admin

26 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading