ವೃದ್ದಾಶ್ರಮದಲ್ಲೋ, ಅನಾಥಾಶ್ರಮದಲ್ಲೋ
ಇರಬೇಕಾದ ಹಿರಿಯ ಜೀವ
ಅಪ್ಪಿ ತಪ್ಪಿ
ಮನೆಯಲ್ಲಿದ್ದರು
ಇತ್ತೀಚೆಗೆ ದಿನವೂ ದಿನ ಪತ್ರಿಕೆಯ ಶೃದ್ದಾಂಜಲಿಯ
ಕಾಲಮುಗಳನ್ನೆ ಓದುತ್ತಿದ್ದರು
“ಅಪ್ಪಾ ನೀನು ಸತ್ತರೆ ನಿನ್ನ ಶೃದ್ದಾಂಜಲಿಯನ್ನೂ ಹಾಕಿಸುತ್ತೇನೆ
ಯೋಚಿಸಬೇಡಿ “, ಮಗನ ತಾತ್ಸಾರ
” ನಿಮ್ಮಪ್ಪನಿಗೆ ಸತ್ತ ಮೇಲಾದರೂ ಪೇಮಸ್ ಅಗೋ ಅಸೆ
ಕಣೋ “, ಹೆಂಡತಿಯ ಕುಟುಕು
“ಈಗಲೇ ಒಂದು ಒಳ್ಳೆಯ ಪೋಟೂ
ತೆಗಿಸಿಬಿಡಿ, ನಿಮ್ಮಪ್ಪನದು “, ಸೊಸೆಯ ಕುಹಕ
ಮೊಮ್ಮಗು ಬಂದು ತಾತನನ್ನು ಕೇಳಿತು
“ದಿನಾ ಏನ್ ನೊಡ್ತಿಯ ತಾತ ಇದರಲ್ಲಿ”
ಹಿರಿಯ ಜೀವ ನಿಟ್ಟುಸಿರಿಟ್ಟು ಹೇಳಿತು
“ಸತ್ತವರ ವಯಸ್ಸು “]]>
ತುಂಬಾ ಚೆನ್ನಾಗಿದೆ ಕೃಷ್ಣಣ್ಣ