ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಶಾಲ್ ಮ್ಯಾಸರ್ ಹೊಸ ಕವಿತೆ- ಯುದ್ಧ ನಿಲ್ಲಲಿ ಅಷ್ಟೇ…!

ವಿಶಾಲ್ ಮ್ಯಾಸರ್

——

ಈ ಕಾಲಕ್ಕೆ ಯಾವ 

ಕವಿತೆಯು ಹುಟ್ಟುವುದಿಲ್ಲ

ಉಸಿರು ಕಟ್ಟುವ 

ಕಂಬನಿಯೊಂದನ್ನು ಬಿಟ್ಟು

ಈ ಕಾಲಕ್ಕೆ ಯಾವ 

ರೂಪಕವು ಕೆಲಸಕ್ಕೆ ಬರುವುದಿಲ್ಲ

ಜಗದ ದುಃಖಕೆ ತೆರೆದ 

ಸಮಣನ ಕಿವಿಯೊಂದು ಬಿಟ್ಟು

ಈ ಕಾಲಕೆ ಯಾವ ಧರ್ಮವೂ ದಯಾಮಯಿ ಆಗಿರುವುದಿಲ್ಲ

ಕಣ್ಣೊರೆಸುವ ಒರಟಾದ ಕಯ್ಯೊಂದನ್ನು ಬಿಟ್ಟು

ಈ ಕಾಲಕ್ಕೇ ಯಾವ ದೇಶವೂ ಏನು ಮಾಡುವುದಿಲ್ಲ

ಗಡಿ ಕೊರೆದು ದ್ವೇಷ ತುಂಬಿ ಯುದ್ಧದ ಹೊಟ್ಟೆ ತುಂಬಿಸುವುದು ಬಿಟ್ಟು

ಪ್ರಭುವೆ ಈ ಕಾಲಕ್ಕೇ ಏನೂ ಮಾಡಲಾಗುವುದಿಲ್ಲ

ಅಳಬಹುದಷ್ಟೆ ಪಾಪಿಗಳನ್ನು ಶಪಿಸಬಹುದಷ್ಟೆ

ಮಣ ಮಣ ಗೀಚಬಹುದಷ್ಟೆ 

ಗಂಟಲು ಕಟ್ಟುತ್ತದೆ

ದುಃಖ ಉಮ್ಮಳಿಸುತ್ತದೆ

ನಿದ್ರೆಯಲ್ಲಿ ಈ ರಕ್ತ ಸಿಕ್ತ ಬೂಟುಗಳು ಎದೆಗೆ ಒದೆಯುತ್ತವೆ 

ಇನ್ನೇನೂ ಮಾಡಲಿ ಪ್ರಭು

ಯುದ್ಧ ನಿಲ್ಲಲಿ ಅಷ್ಟೇ…!

‍ಲೇಖಕರು avadhi

22 October, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading