ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಸುಂಧರಾ ಕದಲೂರು ಕವಿತೆ- ಸಂಬಂಧ

ವಸುಂಧರಾ ಕದಲೂರು

ಗೋಡೆ ಬಿರುಕು ಬಿಟ್ಟಿದೆ.
ಹಜಾರದಲ್ಲಿ ಬೇಕಿರಲಿಲ್ಲ
ಅದು.

ಯಾವುದೋ ಮೈಮರೆತ
ಕ್ಷಣದಲಿ ಧುತ್ತೆಂದು
ಉದ್ಭವಿಸಿ…

ಒಂದೊಂದು ಮೌನ,
ಮುನಿಸು… ಇಟ್ಟಿಗೆಗಳಾಗಿ
ರೂಪಾಂತರಿಸಿ…

ಭಿತ್ತಿಯ ಮೇಲೆ ಹುತ್ತ..!
ಒಳಗೊಂದು ಮುಲುಗುವ
ಸರ್ಪ …

ಮೈ ನಡುಗಿಸಿತು.
ಭಯ…!

ಇಷ್ಟೆಲ್ಲಾ
ಅನಾಹುತ ಯಾವಾಗ
ಆಗಿಹೋಯಿತು?

ಹಾವ ಬಡಿಯಲು
ಒಗೆದ ಕಲ್ಲು ಗೋಡೆಗೆ
ತಾಕಿತು..

ಕಲ್ಲೊಗೆದ ಗೋಡೆಯಲ್ಲೀಗ
ಬಿರುಕು

‍ಲೇಖಕರು Avadhi

18 February, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading