ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಾಲ್ ಬಾಗ್ ನಲ್ಲಿ ಸಾವಯವ ಮೇಳ

ಆತ್ಮೀಯರೇ

ವಾಕಿಂಗ್ ಸ್ಪಾಟ್, ಪ್ರೇಮಿಗಳ ತನ, ಸಸ್ಯ ಶಾಸ್ತ್ರೀಯ ತೋಟ ಕೆಂಪು ತೋಟ ಲಾಲ್ ಬಾಗ್ ನಲ್ಲಿ ಸೆಪ್ಟೆಂಬರ್ ೧೨ ಮತ್ತು ೧೩ ರಂದು ‘ಸಾವಯವ ಮೇಳ’ ನಡೆಯಲಿದೆ. ರಾಜ್ಯದ ವಿವಿಧ ಕಡೆಗಳಿಂದ ಸಾವಯವ ಕೃಷಿಕರು ತಾವು ಬೆಳೆದ ಉತ್ಪನ್ನಗಳನ್ನು ತಂದು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಿದ್ದಾರೆ.

ಇಲ್ಲಿಯವರೆವಿಗೂ ರೈತರ ಮಟ್ಟದಲ್ಲಿ ನಡೆಯುತ್ತಿದ್ದ ಸಾವಯವ ಕೃಷಿ ಆಂದೋಲನ ಈಗ ಗ್ರಾಹಕರ ಮನೆ ಬಾಗಿಲಿಗಿಗೆ ಬಂದು ನಿಂತಿದೆ. ರೈತರು ಬೆಳೆದ ಉತ್ಪನ್ನಗಳನ್ನು ದಲ್ಲಾಳಿಗಳ ಕಿರಿಯಿಲ್ಲದೆ ಗ್ರಾಹಕರಿಗೆ ನೇರವಾಗಿ ತಲುಪಿಸುವ ಕಾರ್ಯ ಆರಂಭವಾಗಿದೆ. ಅದರ ಮೊದಲ ಪ್ರಯತ್ನವೇ ಸಾವಯವ ಆಹಾರ ಮೇಳ.

ಈ ಮೇಳವನ್ನು ಕೇವಲ ವಾಣಿಜ್ಯ ದೃಷ್ಟಿಯಿಂದ ಆಯೋಜಿಸಿಲ್ಲ. ಸತ್ವ ಪೂರ್ಣ ಆಹಾರ ಕುರಿತು ಜನರಲ್ಲಿ ಅರಿವು ಮೂಡಿಸುವುದು, ಕಳೆದು ಹೋಗಿರುವ , ಮರೆತು ಹೋಗಿರುವ ಸಾಂಪ್ರದಾಯಿಕ ಆಹಾರವನ್ನು ಪರಿಚಯಿಸುವುದು ಅವುಗಳ ರುಚಿಯನ್ನು ಉಣಬಡಿಸುವುದು ಈ ಮೇಳದ ಉದ್ದೇಶ.

ಹಾಗಾಗಿ ಮೆಅಲಕ್ಕೆ ಭೇಟಿ ನೀಡುವವರಿಗೆ ಮಾಹಿತಿ, ಮನರಂಜನೆ ಹಾಗೂ ರುಚಿಕಟ್ಟಾದ ದೇಸಿ ಆಹಾರ ಕೂಡ ಲಭ್ಯವಾಗುತ್ತದೆ. ಜೊತೆಗೆ ತರಕಾರಿ ಬೀಜಗಳು (ನಾಟಿ), ತಾಜಾ ತರಕಾರಿಗಳು. ಸಾವಯವ ಆಹಾರ ಉತ್ಪನ್ನ, ಕೃಷಿ ಪುಸ್ತಕಗಳು, ತೋಟಗಾರಿಕೆ ಮಾಹಿತಿ ಬಿತ್ತಿ ಪತ್ರಗಳು.. ಇವೆಲ್ಲದರ ಜೊತೆಗೆ ಸಾವಯವ ಪ್ರೀತಿಯ ಗೆಳೆಯರನ್ನು ಭೇಟಿಯಾಗಬಹುದು.

ಬನ್ನಿ ಕೆಂಪು ತೋಟಕ್ಕೆ,

ಭಾಗವಹಿಸಿ ಸಾವಯವ ಆಹಾರ ಮೇಳದಲ್ಲಿ.

ಉತ್ತೇಜಿಸಿ ಸಾವಯವ ಉತ್ಪನ್ನಗಳನ್ನು !

ಪ್ರೀತಿಯಿಂದ

ಜೈವಿಕ್ ಕೃಷಿಕ್ ಸೊಸೈಟಿ ,

ಸಹಜ ಸಮೃದ್ಧ , ಅನ್ನದಾನದ ಪರವಾಗಿ….

-ಗಾಣಧಾಳು ಶ್ರೀಕಂಠ

savayava

‍ಲೇಖಕರು avadhi

12 September, 2009

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading