ಬಸವರಾಜ ಸೂಳಿಭಾವಿ
1
ಮೈಸೂಸುವ ಸುಗಂಧ ಯಾವ ಬ್ರ್ಯಾಂಡಿನದೆಂದು ಅವರೆಲ್ಲ ಕೇಳಿದರು
ನಿನ್ನೆ ರಾತ್ರಿ ನಿನ್ನ ನಗುವ ಎವೆಗಳು ಕ್ಷಣ ಮೈಗೆ ತಾಗಿದ್ದು ನೆನಪಾಯಿತು
2
ಎಲ್ಲ ಅಪರಾಧವೂ ವ್ಯಕ್ತಿಯಿಂದಲೆ ಆಗಿದೆಯೆಂಬ ದನಿ ಕಿವಿಗೆ ಬಿತ್ತು
ಸಮಾಜದ ಗೋಡೆ ಮೇಲಿನ ಕನ್ನಡಿಯ ಯಾರೊ ಕದ್ದಂತೆ ಕಂಡಿತು
3
ರಾತ್ರಿ ನಾಟಕ ನೋಡಿದೆ
ಬೆಳಕೇ ಪ್ರಧಾನ ಪಾತ್ರಧಾರಿಯಾಗಿತ್ತು
4
ಗಲ್ಲುಶಿಕ್ಷೆಯ ತೀರ್ಪು ಬಂದಾಗ ಆ ತಾಯಿಯನ್ನು ನೋಡಿದೆ
ಹಸಿವಿನಿಂದ ಅಳುವ ಕೂಸಿಗೆ ನಗುವ ಗೊಂಬೆ ತೋರಿಸಿ ರಮಿಸುತ್ತಿದ್ದಳು
5
ಕಡಲು ದಂಡೆ ಮೇಲಿನ ಹೆಜ್ಜೆಗಳ ಅಳುಕಿಸುತ್ತಿದೆ
ಒಡಲ ಮೇಲೆ ಹೊಸದು ಮೂಡಲೆಂದೇ…
6
ಮಲ್ಲಿಗೆ ಹಿಡಿದು ಅಂಗಳದ ತುಂಬ ಓಡಾಡಿದ್ದರು
ಆ ತುಟಿಯ ಉತ್ಕಟತೆ ಹಾಡಾಗಲು ಬಿದಿರೇ ಬೇಕಾಯಿತು
7
ಇಡೀ ರಾತ್ರಿ ಎಚ್ಚರಿದ್ದೆ
ಇರುಳ ಗಡಿಗೆ ಒಡೆವ ಸದ್ದು ಕೇಳಲೇ ಇಲ್ಲ
8
ನಿಸ್ವಾರ್ಥ ಪ್ರೇಮ ನನಗೆ ಹೇಗೆ ಹೊಂದೀತು ?
ನಿನ್ನ ಬಯಸುವ ಸ್ವಾರ್ಥ ನನ್ನಲಿ ನಿಗಿನಿಗಿಯಾಗಿಯೇ ಇದೆ
9
ಪ್ರೀತಿಯನ್ನು ಮಾತು ಮಾಡಲಿಲ್ಲ
ಎಲ್ಲ ವರ್ಣನೆಯನು ಮೀರಿ ನಿಂತಿತು
10
ದಟ್ಟ ಕತ್ತಲು
ಮಿಣುಕುಹುಳು ದಾರಿ ತಪ್ಪುವುದಿಲ್ಲ
11
ದೀಪ ಹಚ್ಚಿಕೊಂಡು ಅಲೆದವರಿಗೆ ಸಿಕ್ಕದ ಬುದ್ದ
ದೀಪವಾದವರಲ್ಲಿಗೇ ಬಂದು ಸುಮ್ಮನೆ ಲೀನನಾದ.
12
ಬರೆದ ಪತ್ರದಲಿ ಒಂದೇ ಸಾಲಿತ್ತು
ಈ ಕಲ್ಲು ನಿನ್ನ ಬೆರಳ ಸ್ಪರ್ಶದಿಂದ ಗಂಡಾಯಿತು







ರಾತ್ರಿ ನಾಟಕ ನೋಡಿದೆ
ಬೆಳಕೇ ಪ್ರಧಾನ ಪಾತ್ರಧಾರಿಯಾಗಿತ್ತು…!
Basu, nimmee saalugaLinda naanu mookavismita.
nice..very..very nice sir.
adbhuta roopakagalu…
adbutha salgalu-smitha.
ದಟ್ಟ ಕತ್ತಲು
ಮಿಣುಕುಹುಳು ದಾರಿ ತಪ್ಪುವುದಿಲ್ಲ
ದೀಪ ಹಚ್ಚಿಕೊಂಡು ಅಲೆದವರಿಗೆ ಸಿಕ್ಕದ ಬುದ್ದ
ದೀಪವಾದವರಲ್ಲಿಗೇ ಬಂದು ಸುಮ್ಮನೆ ಲೀನನಾದ.
ಈ ಎರಡೂ ಹನಿಗಳು ಕೇವಲ ಹನಿಗಳಲ್ಲ ಮನವ ಕದಡಿ, ಕೆದಕಿ ನಿಜವಾದ ಬೆಳಕು ತೋರುವ ದೀಪಮಾಲೆ. ತುಂಬಾ ಇಷ್ಟವಾದವು ಬಸವಾರಾಜ್ ಸೂಳಿಬಾವಿ ಅವರೆ…
-ರಮೇಶ್ ಹಿರೇಜಂಬೂರು
ಪ್ರತಿಕ್ರಿಯಿಸಿದ, ಇಷ್ಟಪಟ್ಟ ಎಲ್ಲರಿಗೂ ಮತ್ತು ಪ್ರಕಟಿಸಿದ ಮೋಹನ ಅವರಿಗೂ ಒಂದನೆಗಳು
ಬಸೂ
ಎಲ್ಲಾ ಅಪರಾಧವೂ ವ್ಯಕ್ತಿಯಿಂದಲೇ ಆಗಿದೆ ಎಂಬ ದನಿ ಕಿವಿಗೆ ಬಿತ್ತು. ಸಮಾಜದ ಗೋಡೆಯ ಮೇಲಿನ ಕನ್ನಡಿಯ ಯಾರೋ ಕದ್ದಂತೆ ಕಂಡಿತು. ಮತ್ತು 2-ಮಲ್ಲಿಗೆ ಹಿಡಿದು ಅಂಗಳದ ತುಂಬಾ ಓಡಾಡಿದ್ದರು ಆ ತುಟಿಯ ುತ್ಕಟತೆ ಹಾಡಾಗಲು ಬಿದಿರೇ ಬೇಕಾಯಿತು.
ಅದ್ಭುತ ಸಾಲುಗಳು ಬಸೂ
ಸಾಲುಗಳು…ಚಿಕ್ಕ ಹಾಗೂ ಚೊಕ್ಕ ಆದರೆ ಪರಿಣಾಮ ಅಪಾರ…ಚಾಪ್ಲಿನ್ ಸಿನಿಮಾಗಳಂತೆ