ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೇಖಾ ರಂಗನಾಥ ಕವಿತೆ- ಬಯಲು ಹಾಳೆಯ ಅಜ್ಞಾತವಾಸ…

ರೇಖಾ ರಂಗನಾಥ 

ಕಿಡಕಿ ತೆರೆದಡೆ
ಓಡುವ ಭೂತದ ನೆರಳು

ಆತನ ಎದುರು
ಹೇಗೆ.. ನೀ..?
ಬಿಡು, ನಿನಗೆ ಆತಂಕವಿರದು…
ಹಾಜರಾಗಲೇ ಬೇಕಲ್ಲವೇ ನೀ ..?
ಆತ್ಮ ಸಾಕ್ಷಿಯ ಕಟಕಟೆಯಲಿ..

ದೊರೆಯ ದರ್ಬಾರು
ದೇಗುಲ ಗೋಪುರ
ಪಂಜುಗಳ ಮೆರವಣಿಗೆ
ಅಗೋ..!
ಬೆಳಕು ಮಿಂದು
ಕಾತರಿಸುವ ಕಣ್ಣುಗಳು..

ಹೊಳೆ ದಂಡೆ ಸಾಲು
ಧೋ.. ಸುರಿವ ಮಳೆ
ಇಗೋ… ನೀರುದುಂಬುವ ಹಬ್ಬ!

ಮೈ ನೆರೆದು ಕೂತ ಸಕ್ಕರೆ ಗೊಂಬೆ
ಯುಗದ ಕುರುಹು

ಹಗಲು..
ಹಾಲು ಬಾನ
ಹಯನವನುಂಡು
ಇರುಳಲಿ..ಚಂದಿರನಿಗೆ
ನೀನಿತ್ತ ಬದುವು…

ಏನೆಂದು ಉತ್ತರಿಸುವೆ!

ನಿನ್ನಂತೆ..
ಜಗವು ಎಣಿಕೆಯಲಿ ವ್ಯಸ್ತ
ಕೈ ಹಿಡಿದು ನಡೆಯಲೇ ಬೇಕಿದೆ
ಮೌನದೊಳಗೊಂದು ಮಾತು
ಬಯಲು ಹಾಳೆಯ ಅಜ್ಞಾತವಾಸ.

‍ಲೇಖಕರು Admin

11 December, 2022

1 Comment

  1. ಲಿಂಗರಾಜ ಸೊಟ್ಟಪ್ಪನವರ

    Fine ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading