ಸಿ ವಿ ಶೇಷಾದ್ರಿ ಹೊಳವನಹಳ್ಳಿ
1
ರೆಕ್ಕೆಗಳನ್ನು ಕಿತ್ತು ಹೊದೆಸಿ ಮಾಡಲಾದ ಕುಟೀರದಲ್ಲಿ ವಾಸ ಮಾಡಿದೆ ಆಕಾಶ.
ಹೆಣಗಳ ಹೆಗಲ ಮೇಲೆ ಮಲಗಿದೆ ಭೂಮಿ.
ಚರ್ಮದ ಬಟ್ಟಲುಗಳು ಬಳುಕುತಿವೆ.
ಒಮ್ಮೆ ವಿಷ, ಒಮ್ಮೆಅಮೃತ ಬಿಂದುತೊಟ್ಟಿಕ್ಕುತ್ತಿವೆ.
ರಕ್ತದ ನದಿಯಲ್ಲಿ ಧರ್ಮದ ದೋಣಿ ಎಲ್ಲಿಗೆ ಹೊರಟಿದೆ?
2
ಸಮುದ್ರವನ್ನೇ ಹಾರಿ ಬಂದ ರೆಕ್ಕೆಗಳು
ದಡದಲ್ಲಿ ಬೀಸಣಿಗೆಯಾಗಿ ಮಾರಾಟವಾದವು.
ಘೋರ ಕಾಡನ್ನೇ ದಾಟಿ ಬಂದ ಪಾದುಕೆಗಳು
ಊರೊಳಗೆ ಉರುವಲಾದವು.
3
ಆಯುಧಗಳು ಬೇರೆ ಬೇರೆಕಡೆ ಹೋಗುವ ಮುಂಚೆ
ಇದೇ ಮಾರುಕಟ್ಟೆಯಲ್ಲಿದ್ದವು.
4
ನೀರು ಸೇರುವ ಮುಂಚೆ ಚರಂಡಿ.
ಬನ್ನಿ ಬೇಗ ಚಾಚೋಣ ಚೊಂಬು.
ಬನ್ನಿ ಬೇಗ ಏಣಿ ಮಾಡೋಣ
ಚಟ್ಟವಾಗುವ ಮುಂಚೆ ಬೊಂಬು.
5
ಮಧುರಕಂಠದ ಹಕ್ಕಿಗಳೇ..
ಏಕಾಂತದಲ್ಲಿ ಎಷ್ಟು ಹುಳುಗಳ ಸಾಯಿಸಿದಿರಿ.
6
ಎಂತೆಂಥ ಭೀಕರ ಘಟನೆಗಳು
ಎಷ್ಟೊಂದು ಸೋಲುಗಳ ಸಮಾಚಾರ..!
ಎಂಥ ಭಯದ ಸಮಯ..!
ಮಧ್ಯೆ ಮಧ್ಯೆ ಹೇಳಲಾಗುತ್ತಿದೆ..
ಸಮಾಚಾರ್ಔರ್ ಭೀ ಹೈಂ
ಪಹಲೆ ಲೇಂಗೆ ವಿರಾಮ್]]>






ಕವಿಯ ಆತಂಕಕ್ಕೆ ಓದುಗನೂ ಒಳಗೊಳ್ಳುವಂತೆ ಕವಿತೆ ಸಶಕ್ತವಾಗಿದೆ. ಘಟನಗೆಳ ಭ(ಭಾ)ರದಲ್ಲಿ ಉತ್ತರ ಸಿಕ್ಕದ ತತ್ತರಗಳಿಗೆ ಕೊನೆ ಎಂದೋ?