ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮೇಷ್ಟ್ರಿರೋದು’…

-ನೀಲಿ ಗ್ಯಾನ

ಹೂವ ತುಂಬಿದ ಗಮಲು
ಕಾಣುವುದಿಲ್ಲವಲ್ಲಾ
ಎಂದವನ ಕಣ್ಣುಗಳನ್ನೆವೆಯಿಕ್ಕದೆ
ನೋಡಿ
‘ಪಾಪರೀ ಇವನಿಗೆ ಕಣ್ಣೇ ಇಲ್ಲ’
ಎಂದನುಕಂಪಿಸುವ;
ಮೂರ್ತಾನುಮೂರ್ತಗಳನ್ನು
ನಿಪ್ಪೊಳರಡಿ
ಅಲ್ಲಮನುಸುರಿಂದ ಉರುಬಿ
ಸುಡುಕೆಂಡದ ಬೆರಗು
ಕಣ್ಬೆಳಕು

ಆಕರಗಳನು ಈಡಾಡಿ
ನಿರಾಕಾರದಿ ಸಂಕರ
ಸಂಬಂಧಗಳ ಕಳಚಿ
ಸಂಬಂಜದೊಳಗುಳಿದ

ಆತ್ಮದೊಳೂ ಇಲ್ಲದೆ
ಅನಾತ್ಮನಲ್ಲೂ ಸಿಗದೇ
ಇದೆಂಥಾ ಆಟ
ಅಂಕ ಗಣಕ
ಸುಂಕ ಪದಕ
ಗುಣಾವಗುಣಗಳಿಗೂ ಎಟುಕದ
ಇದೆಂಥಾ ಕಣ್ಣಾಮುಚ್ಚಾಲೆಯಾಟ
‘ಹುಡುಕಿ’ ಇನ್ನೆಲ್ಲಿ ಹೋದಾರು
ವಿಧಾನಮಂಡಲದಲ್ಲೂ ಇಲ್ಲ
ಕಮಂಡಲದಲ್ಲೂ ಇಲ್ಲ
ಪರಿಷತ್ತಲ್ಲೂ ಇಲ್ಲ ಪ್ರಶಸ್ತಿಯಲ್ಲೂ ಇಲ್ಲ
ಆಹಾ..! ‘ಇಲ್ಲ’ದಲ್ಲಿರುವರಲ್ಲಾ
ಎಂಥಾ ಮೋಡಿಗಾರ

ಮುಗುದ ಮಣ್ಣು
ಜಲಸಂಸ್ಕೃತಿಗೆ ಹದವಾಗಿ
ತಿರುಗುವ ಕಾವ್ಯ ತಿಗರಿಯಿಂದ
ಮೂಡಿದ ಮೂಡಿದ
ಮೂಡಣದಿ ಪುದ್ಗಲನಾದ
ಪಡುವಣದಿ ಪುನರ್ಭವಿಸಿದ
ನೀರದೀವಿಗೆಯಲ್ಲಿ ಪಯಣಿಸುವ
ಇವನೆಂಥ ಜಲಗಾರ

ಇಲ್ಲೇ ಇದ್ದಾರೆ ಇರುವಲ್ಲೇ
ತಾಕುವ ಸ್ಪರ್ಶದಲ್ಲಿ
ಹಂಬಲದ ಅನಘದಲ್ಲಿ.

‍ಲೇಖಕರು avadhi

2 November, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading