ಧ್ಯಾನ
ಹರೀಶ್ ಕಟ್ಪಾಡಿ
ಒಂಟಿಕಾಲಿನ ಮೇಲೆ
ಕಠಿಣ ತಪಸ್ವಿ ಸಾಧು
ಭೇಟೆಗೆ ಹೊಂಚುತ್ತಿದೆ ಕೊಕ್ಕರೆ.

ಕವಿತೆಯ ಧ್ಯಾನದಲ್ಲಿ
ಕಳೆದುಹೋದ ಕವಿ
ಮೀನಿಗೆ ಗುರಿಯಿಟ್ಟಿದೆ ಮಿಂಚುಳ್ಳಿ.
ಆಗಸದಂಚಿಗೆ ಹಾರಿ
ಮರೆಯಾಯಿತು ಬೆಳ್ಳಕ್ಕಿ ಮಂದೆ
ಮಿಂಚಿ ಮರೆಯಾದ ಕವಿತೆಯ ಸಾಲು.
ಸಿಕ್ಕರೆ
ಕವಿಗೆ ಕವಿತೆ
ಮಿಂಚುಳ್ಳಿಗೆ ಮೀನು
ನಿನಗೆ ನೀನು
ನನಗೆ ನಾನು






Maarmikavaagide! Chennaagide.
very..very nice.sir
thanks