ಶ್ರೀದೇವಿ ಕೆರೆಮನೆ

ಮತ್ತೆಂದೂ ಒಂದೇ ಒಂದು
ಅಕ್ಷರವನ್ನೂ ನಿನ್ನ ಕುರಿತಾಗಿ
ಬರೆಯ ಬಾರದೆಂದು ನಿರ್ಧರಿಸಿ ಬಿಟ್ಟಿದ್ದೇನೆ..
ನನ್ನ ನೆನಪಿನ ಹೊರತಾಗಿಯೂ
ನೀನು ನಿಶ್ಚಿಂತೆಯಿಂದ ಇರಬಲ್ಲೆ
ಎಂಬ ಅರಿವಾದ ಮೇಲೆ
ನನ್ನೆಲ್ಲ ಅಕ್ಷರಗಳೂ ಅರ್ಥ ಕಳೆದುಕೊಳ್ಳುತ್ತಿದೆ
ನೀನಲ್ಲಿ ನಿನ್ನ ಸಂಭ್ರಮದಲ್ಲಿ
ಎಲ್ಲವನ್ನೂ ಮರೆತು ಹಾಯಾಗಿರುವಾಗ
ನಾನಿಲ್ಲಿ ನಿನ್ನ ನೆನಪಿನ ನೋವಲ್ಲಿ
ಅಕ್ಷರದೊಂದಿಗೆ ಹಾದರ
ಮಾಡಿಕೊಂಡಿರುವುದಾದರೂ ಎಷ್ಟು ಸರಿ?
ಹಾಯಾಗಿರು..
ಮತ್ತೆ ಬರೆಯಲಾರೆ
ನಿನ್ನ ಮುರಿದು ಬಿದ್ದ ಪ್ರೀತಿಯ ಕುರಿತು
ಒಂದಾಗದ ಮನಸಿನ ಕುರಿತು
ಕೊನೆಗೆ …….
ಬರೀ ಮೋಸದಿಂದ ನೀನು
ಬಳಸಿಕೊಂಡ ದೇಹದ ಕುರಿತು






Kaviteya Bhavane… geleyana kuritada nenapugalu alisi hakuva pariyannu hrudyakkada gayavannu maretu biduva novugalannu prastuta kaviteyalli channagi mudi bandive…
ಅಧ್ಭುತ ಭಾವ ಲಹರಿ….ತುಂಬಾ ಚೆನ್ನಾಗಿದೆ…
ಮುರುಕು ಪ್ರೇಮದ ಅನುಭಾವ ಅದ್ಬುತವಾಗಿದೆ
ಸಾತ್ವಿಕ ಸಿಟ್ಟಿನ ನಿಟ್ಟುಸಿರು, ಕೇಳಿಸಿತು, ಸ್ಪರ್ಶಿಸಿತು, ಮನಗಾಣಿತು. ಪ್ರೀತಿಯ ಸೆಳೆತಕ್ಕೆ ಸಿಕ್ಕ ಜೀವವೊಂದರ ನೋವನ್ನು ತುಂಬ ಚನ್ನಾಗಿ ಒಡಮೂಡಿಸಿದ್ದೀರಿ, ಶ್ರೀದೇವಿ ಜಿ.
Thank u all
uttama kavite..
ಅನುಭಾವವೆ ಸರಿ
ಪ್ರೇಮವೊಂದು ಭ್ರಮಾಧೀನ ಸ್ಥಿತಿ. ಅದರ ಅಧೀನವಾದಾಗ ಅಧೀರರಾಗುವುದು ಸಹಜ. ಪೊರೆ ಕಳಚಿದಾಗ ಸ್ಥೈರ್ಯವು ಸಂಗಾತಿಯಾಗುತ್ತೆ ಎನ್ನುವುದನ್ನು ಕಟ್ಟಿಕೊಟ್ಟ ಕವನ ಚೆನ್ನಾಗಿದೆ !
ಮುರಿದ ಹೃದಯದ ಮಿಡಿತಗಳನ್ನು ಅಕ್ಷರವಾಗಿಸಿದ ಪರಿ ಸುಂದರವಾಗಿದೆ.
-ಗಣಪತಿ ಬಾಳೆಗದ್ದೆ
Very nice