ಕಾವ್ಯಶ್ರೀ ಎಚ್
ವಿದಾಯಕೂ ಮೊದಲೇ
ಮುಂದಿನ ಭೇಟಿಯ ನಿರೀಕ್ಷೆ
ನಿನ್ನೊಂದಿಗೆ ಮಾತ್ರ ಸಾಧ್ಯ
ಮಾತಿಗೂ ಮೊದಲೇ
ಶುರುವಾಗುವ ಸಂವಾದ
ಮಳೆಗೂ ಮೊದಲಿನ ತಂಗಾಳಿಯಂತೆ
ಬೆಳುದಿಂಗಳೇ ಸೋಂಕಿದಂತೆ
ಕಣ್ಬೆಳಕಿನಲಿ ಅರಳುವ ಮೊಗ
ಎದೆಬಡಿತಕೆ ಹೊಮ್ಮುವ ರಾಗ
ಮೌನದಲೇ ಲೀನವಾದಂತೆ ಧ್ಯಾನ
ಸಾನಿಧ್ಯವೇ ಸಾರ್ಥಕ್ಯವಾಗುವ ಪರಿ
ಯಾವ ದರುಶನವೂ ತೋರದ ದಾರಿ
ಒಲವೇ
ನಿನ್ನೊಂದಿಗೆ ಮಾತ್ರ ಸಾಧ್ಯ

ಅಲ್ಲಿ ಆ ಊರಿನಲ್ಲಿ
ಮುಳುಗುವುದಿಲ್ಲ ಚಂದಿರ
ನನ್ನಪ್ಪಣೆಯಿಲ್ಲದೆ. . .
ಮೂಡುವುದಿಲ್ಲ ಸೂರ್ಯ
ನಿನ್ನ ಅನುಮತಿಯಿಲ್ಲದೇ…
ಕಾಲ ಚಲಿಸದ ಊರಿಗೆ
ಯಾರೂ ಕರೆಯದ ತಾವಿಗೆ
ನನ್ನ ಕರೆದೊಯ್ಯುವುದು ಎಂದಿಗೆ

ಬೀಸುಗಾಳಿಗೆದುರಾಗಿ
ಕದಲುತಿದೆ ಸೊಡರು
ಬಾ ಕೈ ಜೋಡಿಸು
ಆರದಿರಲಿ ಒಲವಿನ ಹಣತೆ





ಒಲವಿನ ಬೆಳಕು ಉಳಿಸಿಕೊಳ್ಳುವ ಹಂಬಲ ಚೆನ್ನಾಗಿ ಮೂಡಿ ಬಂದಿದೆ,
ಬಾ ಕೈ ಜೋಡಿಸು
ಆರದಿರಲಿ ಒಲವಿನ ಹಣತೆ
Tumba Chennagide…
Thank you
ಕಣ್ಬೆಳಕಿನಲಿ ಅರಳುವ ಮೊಗ
ಎದೆಬಡಿತಕೆ ಹೊಮ್ಮುವ ರಾಗ
ಮೌನದಲೇ ಲೀನವಾದಂತೆ ಧ್ಯಾನ…..
ಅಧ್ಬುತ ಸಾಲುಗಳು…ತುಂಬಾನೆ ಇಷ್ಟ ಆಯ್ತು….
ಮತ್ತೆ ಶಬ್ದಕ್ಕೆ ಸ್ಥಳವೆಲ್ಲಿ?
Thank you .ಅರ್ಥವಿಲ್ಲ, ಸ್ವಾರ್ಥವಿಲ್ಲ ಬರಿಯ ಭಾವಗೀತ
Dhanyavadagalu avadhi balagakke
Thank you. GKN?
Very nice poem indeed with positive and optimistic elements.
Thank you Sudarshanji