ನೂತನ ದೋಶೆಟ್ಟಿ

ಉದ್ದಾನುದ್ದ ಕೈ ಸುತ್ತ ಹಬ್ಬಿದ ಬಳ್ಳಿಗಳು
ಗಾಳಿಯ ಮೊರೆತವೊ ಬಿಸಿಲ ಬೇಗೆಯೊ
ಉಕ್ಕುವ ಆಗಸವೋ
ಇತ್ತ ಪರಿವೆಯೇ ಇಲ್ಲ
ಐಭೋಗ ಐಸಿರಿಗೆ
ಮುಚ್ಚಿದ ಕಂಗಳ ಒಳಗೆ
ಹೊತ್ತಿತು ಬೆಳಕು
ಆಭರಣ ವಸ್ತ್ರಾದಿಗಳ ಪೀಡೆ ಬೇಡವೇ ಬೇಡ
ನಿಜದಿಟ್ಟಿಯಲ್ಲಿ ನಿಂತುಬಿಟ್ಟಿತು
ದೈವೀಕತೆ
ಎಲ್ಲ ತೊರೆದವಗೆ ಹೊಯ್ ಹೊಯ್ ಮಜ್ಜನ
ಸುರಿ ಸುರಿವ ಗಂಧ, ಶ್ರೀಗಂಧ
ನಾರಿಕೇಳ, ಕಲಕಚೂರ್ಣ
ಕಣ್ತೆರೆದಾನೆ ಅವನು?
ನಸುನಗುತ್ತ ಹಂಗಿಸುತ್ತಾನೇನೋ?
ನಿಮ್ಮ ಪರಿ ನಿಮಗೆ ಅಂದಾನೇನೋ !
ಸುತ್ತೆಲ್ಲ ಜನಜಾತ್ರೆ ಬಹುಪರಾಕು
ಕೋಟಿ ಕೋಟಿ ಕರಗುತ್ತಿದೆ
ಮರುಗುವನೇನೋ ?
ಕರಗಿತು ಜನಜಂಗುಳಿ
ಒಂಟಿ ಬೆಟ್ಟದ ಮೇಲೆ ತನ್ನದೇ ನಂಟು
ಬದುಕು ಬತ್ತಲೆಯಾದಾಗ
ಬತ್ತಲವನೆ ಉಟ್ಟ ದಿಟ್ಟ ನಿಂತೇ ಬಿಟ್ಟ
ಅಗಾಧ, ಅಚಲ, ಅನವರತ.






ಬಯಲು ಬಯಲನೆ ಉಂಡು ಬಯಲಾದವನು ಬೆಳುಗೊಳದ ಬಾಹುಬಲಿ. ಕನ್ನಡಿಗರಿಗೆ ಬದುಕ ಬಯಲ ಬೆಳಕ ಚೆಲ್ಲಿದವನು .
ಕವಿತೆ ಧ್ವನಿಪೂರ್ಣವಾಗಿದೆ.
Thank you Nagaraj..
Vastvikavada ninna barahavanna odidare
Bahubaliyu …Really I am helpless annuttiddano …Eno…annuvastu
Vastavavagide…E…baraha….
Congratulations…..
Thank you
Brilliant!
ಓ.ಧನ್ಯವಾದಗಳು..ರಘು..
ಸುಂದರ
Thanq Vidya