ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಟ್ಟೆ ನಮಗೆಂದೂ ಮಾನ ಮುಚ್ಚಿ ಕೊಳ್ಳಲೂ ಸಿಗಲಿಲ್ಲ …

ಹಸಿದ ಹೊಟ್ಟೆಯ ಶಾಪ

ರಾಜೇಂದ್ರ ಪ್ರಸಾದ್

ಹರಿದ ಅಂಡರುವೇರಿಗೂ ತ್ಯಾಪೆ
ಇದೆ ಸಾಹೇಬರೇ
ಬಟ್ಟೆ ನಮಗೆಂದೂ ಮಾನ ಮುಚ್ಚಿ
ಕೊಳ್ಳಲೂ ಸಿಗಲಿಲ್ಲ, ಶೋಕಿಗೆ
ಸಿಕ್ಕಿತೇ ?!
 
ನಿಮ್ಮ ವಾದ, ತರ್ಕಗಳ
ಹರಟೆಗಿಂತ ನಮ್ಮ ಬದುಕು
ದೊಡ್ಡದು ಅಲ್ವರಾ ?
 
ದುಡಿದ ಕೂಲಿ ದಿನಕ್ಕೆ
ರೂಪಾಯಿಯಲ್ಲೇ ಸಿಗೋದು
ಹ್ಹ ಹ್ಹ ಅದೂ ಅಪಮೌಲ್ಯ
ದುಡಿಸಿಕೊಂಡ ನಿಮಗೆ
ಸಾವಿರ ಸೇರಿದ ಡಾಲರು
ಮತ್ತು ಅದರ ದವಲತ್ತು
 
ಬಡವನ ತುತ್ತು ಅನ್ನದ ಮೇಲೆ
ರಾಜಕಾರಣ ಮಾಡುವ
ನಿಮ್ಮ ಬಾಯಿಗಳಿಗೆ
ನಿಮ್ಮ ದೇವರುಗಳಿಗೆ
ನಿಮ್ಮ ಧರ್ಮಗಳಿಗೆ
ನಿಮ್ಮ ಜಾತಿಗಳಿಗೆ
ಗೆದ್ದಲು ಹತ್ತಲಿ..
 
ನೀವು ನಡೆವ ಚಪ್ಪಲಿ
ನೀವು ಉಣ್ಣುವ ಅನ್ನ
ನೀವು ಹೊದೆವ ಬಟ್ಟೆ
ಎಲ್ಲಾ ಬಡವನ ಬೆವರು
 
ಬೆವರ ಬದಲು ರಕ್ತ
ಕೇಳುತ್ತೀರಿ… ನಿಮ್ಮ ಒಡಲು ಬರಿದಾದರೆ
ಬದುಕು ಬರವಾದೀತು ಸಾಹೇಬರೇ..
ಮುಂದೊಮ್ಮೆ ನಿಮ್ಮ ಬೆವರ ನೀವೇ
ಕುಡಿಯಬೇಕು.. ಕಾಲ ದೂರವಿಲ್ಲ.

‍ಲೇಖಕರು avadhi

14 July, 2013

7 Comments

  1. nagaraj hettur

    Olleya padya bradar .

  2. M.S,Krishna murthy

    bevara badalu raktha kelutiri – estu gora alwa – tumba tikshnavagi baredidirii Rajendra

  3. Anjali Ramanna

    chennaagide ! 🙂

  4. Kanna

    ಬಿರ್ಯಾನಿ ತಿಂದು ಇಂತ ಪೋಯೇಮ್ಮು ಬರೀಬಾರದು ರೀ!

  5. Arpitha

    Kavana ishtavayitu…..

  6. manjuchellur@gmail.com

    ..,.,

  7. manjuchellur

    ..,.,

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading