ಪ್ರತಿಭಾ ಕಾಗೆ

ಬೆತ್ತದ ರುಚಿಯ ಕಂಡ
ಮೊಮ್ಮಗನೆ ಅಜ್ಜನ ನುಡಿಗಳ
ಕೇಳು,
ಅನುಭವದ ಮಾತಿನಲಿ
ಅಡಗಿರುವ ದಿಟ ಸತ್ಯದ
ನೆರಳನು ಕಾಣು
ಬಾಳಿನೂದ್ದಕೂ ಹೋರಾಡಿದ
ಆ ಹಿರಿಜೀವದ,
ನೋವು ನಲಿವುಗಳ ಪದಗಳ
ಆಲಿಸು.
ಮುಂದೊದು ದಿನ
ಆದಾವು ಆಪದಗಳೇ
ನಿನ್ನ ಬಾಳಿಗೆ
ಬೆಳಕಿನ ದೀಪ
ಎತ್ತಲಿಂದೊ ಬಂದವ
ಕಷ್ಟಗಳ ಕಾಮರ್ೋಡಗಳು
ಅಲುಗಾಡದೆ ನಿಂತೆ
ಎದಯೊಡ್ಡಿ ಬಂಡೆಯಂತೆ
ಹಾಗೆಯೇ ಸರಿದು
ಹೋದವು ಕಾಮರ್ೋಡಗಳು
ತುಂಬು ಬೆಳಕನು
ಹರಡಿ.
ಎಂಥಹ ಮಾತುಗಳವು
ಉತ್ಸಾಹದ ಚಿಲುಮೆಗಳು.






ಬೆಳಕಿನ ದೀಪದಂತೆ ಬೆಳಗುವ ಕವಿತೆ,ಅಭಿನಂದನೆಗಳು.
dhanyavadagalu sir