ಡಾ. ಪದ್ಮಿನಿ ನಾಗರಾಜು
ಮನಸು ಒಣಗಿ
ತರಗೆಲೆಯಾದಾಗ
ಮರಭೂಮಿಯ ಒರತೆ
ಜಿನುಗಲಾರಂಭಿಸಿದಾಗ
ಚರ್ಮ ಮಾತಾಡುತ್ತದೆ
ಅವನ ಸ್ಪರ್ಶಕ್ಕೆ
ತುಟಿಯ ಸೊಂಕಿಗೆ
ಹೃದಯದಲ್ಲೊಂದು
ಚಿಲುಮೆ ಚಿಮ್ಮಿ
ಪಾತಾಳಕ್ಕಿಳಿಯಲು
ಪರಿತಪಿಸುತ್ತಿದೆ
ಕಣ್ಣುಗಳ ಮಿಲನ
ತುಟಿಗಳ ಅದರುವಿಕೆ
ಮೈಯ ಬಿಸಿಯ
ಉಸಿರು ತಾಕಿ
ಹೃದಯದ ಬಡಿತ
ಹೊರಗೂ
ನಗಾರಿಯಾಗಿದೆ

ಹೊಕ್ಕುಳಲ್ಲಿ
ಅದೇನೋ ಭಯ
ಸ್ಖಲನ
ಸುಖವೋ
ಮತ್ತೊಮ್ಮೆ
ಗರ್ಭಗಟ್ಟುವ
ಭಯವೋ
ತನುವಿಗೂ ಮನಕ್ಕೂ
ಲೆಕ್ಕ ತಪ್ಪಿದಾಗ
ಸರಿ ತಪ್ಪುಗಳ
ಗುಣಿತ ದೂರಮಾಡಿ
ಅವನು ನಾನು
ನಾವಾಗುವ
ಕ್ಷಣವು
ಸ್ವರ್ಗವೋ
ನರಕವೋ
ತೆಕ್ಕೆಯಲ್ಲಿ
ಜಕೈಸಿದಷ್ಟು
ಕ್ಷಣ
ಜಗವ
ಜಯಿಸಿದ ಭಾವ
ಶೂನ್ಯವೋ
ಯುಗಾಂತರವೋ
ಅವಳು ಅವನು
ಯಾರ
ಗಂಡ ಹೆಂಡಿರೆಂಬ
ಪುರಾವೆ ನೀಡಬೇಕಿಲ್ಲ
ಹೆಣ್ಣೊ ಗಂಡೊ
ಸಾಕ್ಷಿ ನೀಡಬೇಕಿಲ್ಲ
ಅವರು
ತಮ್ಮದೆಲ್ಲವ
ಕಳಚಿ
ಬತ್ತಲಾದಂತೆ
ಅವರಿಗೆ
ಅವರೇ ಆಧಾರ






Nice poem medam
Down to earth
ಮನಸ್ಸಿನ ಭಾವನೆಗಳ ಕೈಗನ್ನಡಿ ಈ ಕವಿತೆ. ಚೆನ್ನಾಗಿದೆ ಮೇಡಂ
ಚೆನ್ನಾಗಿದೆ.