ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೈಸೂರಿನಲ್ಲಿ ’ವಿಮರ್ಶಾ ಕಮ್ಮಟ’


ಕರ್ನಾಟಕ ಸಾಹಿತ್ಯ ಅಕಾಡೆಮಿಯು ವಿಶೇಷ ಘಟಕ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗಾಗಿ ಮೈಸೂರು ಕಂದಾಯ ವಿಭಾಗಕ್ಕೆ ಸಂಬಂಧಿಸಿದಂತೆ 2015 ಫೆಬ್ರವರಿ 25, 26 ಮತ್ತು 27ರಂದು `ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮಾನಸ ಗಂಗೋತ್ರಿ ಆವರಣ’ – ಇಲ್ಲಿ ವಸತಿ ಸಹಿತ ಮೂರು ದಿನಗಳ “ವಿಮರ್ಶಾ ಕಮ್ಮಟ” ವನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ.
ಮೈಸೂರು ಕಂದಾಯ ವಿಭಾಗಕ್ಕೆ ಸೇರಿದ ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ, ಚಿಕ್ಕಮಗಳೂರು – ಜಿಲ್ಲೆಗಳಲ್ಲಿ ವಾಸಿಸುವ ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಹಾಕಬೇಕು.
• 20 ರಿಂದ 40ರ ವಯೋಮಿತಿಯಲ್ಲಿರುವವರು ಮಾತ್ರ ಅರ್ಜಿ ಹಾಕಬೇಕು.
• ಆಸಕ್ತ ಅಭ್ಯರ್ಥಿಗಳು ತಮ್ಮ ವಿಮರ್ಶಾ ಲೇಖನವನ್ನಾಗಲಿ ಅಥವಾ ಕೃತಿಯನ್ನಾಗಲಿ ಅರ್ಜಿಯೊಂದಿಗೆ ಲಗತ್ತಿಸಬೇಕು. ಇವು ಪ್ರಕಟಿತ ಅಥವಾ ಅಪ್ರಕಟಿತವಾಗಿರಬಹುದು.
• ಜಾತಿ ಪ್ರಮಾಣಪತ್ರ ಹಾಗೂ ವಯಸ್ಸಿಗೆ ಸಂಬಂಧಿಸಿದಂತೆ ಎಸ್.ಎಸ್.ಎಲ್.ಸಿ ಅಂಕ ಪಟ್ಟಿಯ ದೃಢೀಕೃತ ಪ್ರತಿಯನ್ನು ಲಗತ್ತಿಸಬೇಕು.
• ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಮೂರು ದಿನಗಳು ಶಿಬಿರದಲ್ಲೆ ವಾಸ್ತವ್ಯ ಮಾಡಬೇಕು.
• ಅರ್ಜಿಯನ್ನೊಳಗೊಂಡ ಲಕೋಟೆಯ ಮೇಲ್ಭಾಗದಲ್ಲಿ ಕಡ್ಡಾಯವಾಗಿ “ವಿ.ಘ.ಯೋ. ವಿಮರ್ಶಾ ಕಮ್ಮಟ” ಎಂದು ನಮೂದಿಸಬೇಕು.
• ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿಬಿರದ ಸ್ಥಳಕ್ಕೆ ಬರಲು ಸಾಮಾನ್ಯ ಬಸ್ ದರವನ್ನು ನೀಡಲಾಗುವುದು ಹಾಗೂ 3 ದಿನಗಳೂ ಊಟ, ಉಪಹಾರದ ವ್ಯವಸ್ಥೆ ಮಾಡಲಾಗುವುದು.
• ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಅಕಾಡೆಮಿಯ ವೆಬ್ ಸೈಟ್ ನಿಂದ ಪಡೆದುಕೊಳ್ಳಬಹುದು.
• ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಫೆಬ್ರವರಿ ಎರಡನೇ ವಾರದಲ್ಲಿ ಅಕಾಡೆಮಿಯ ವೆಬ್ ಸೈಟ್ http://karnatakasahithyaacademy.org ನಲ್ಲಿ ಪ್ರಕಟಿಸಲಾಗುವುದು.
• ಆಯ್ಕೆಯಲ್ಲಿ ಅಕಾಡೆಮಿಯ ತೀರ್ಮಾನವೆ ಅಂತಿಮ.
• ಅರ್ಜಿಯನ್ನು ಈ ಕೆಳ ಕಂಡ ವಿಳಾಸಕ್ಕೆ ಕಳುಹಿಸಬೇಕು.
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12-2-2015
 
ಡಾ. ಬಾಲಗುರುಮೂರ್ತಿ
ವಿಮರ್ಶಾ ಕಮ್ಮಟದ ನಿರ್ದೇಶಕರು,
ಕೇರಾಫ್/ ಕರ್ನಾಟಕ ಸಾಹಿತ್ಯ ಅಕಾಡೆಮಿ
ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು – 560 002
(080-22211730 / 22106460)

ಕರ್ನಾಟಕ ಸಾಹಿತ್ಯ ಅಕಾಡೆಮಿ

ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002

ವಿಮರ್ಶಾ ಕಮ್ಮಟ-ವಿಶೇಷ ಘಟಕ ಯೋಜನೆ

ಮೈಸೂರು ಕಂದಾಯ ವಿಭಾಗ (ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ,

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆಗಳು)

ಅ ರ್ಜಿ

1. ಅಭ್ಯರ್ಥಿಯ ಹೆಸರು
2.ವಯಸ್ಸು
(ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಲಗತ್ತಿಸಬೇಕು)
3.  ಉದ್ಯೋಗ
4. ಸಂಪರ್ಕ ವಿಳಾಸ;
ಮೊಬೈಲ್ ಸಂಖ್ಯೆ/ ದೂರವಾಣಿ ಸಂಖ್ಯೆ
ಇ-ಮೇಲ್ ವಿಳಾಸ
5. ಜಾತಿ (ಜಾತಿ ಪ್ರಮಾಣಪತ್ರವನ್ನು ಲಗತ್ತಿಸಬೇಕು)
6. ವಿಮರ್ಶಾ ಲೇಖನಗಳು / ಕೃತಿಗಳು
(ಪ್ರಕಟಿತ / ಅಪ್ರಕಟಿತ ಪ್ರತಿ ಲಗತ್ತಿಸಬೇಕು)
7. ಇತರ ಆಸಕ್ತಿಗಳು
 
ಅಭ್ಯರ್ಥಿಯ ಸಹಿ
 
 

‍ಲೇಖಕರು G

5 February, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading