ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನೊಲುಮೆಯಿಂದಲೇ ನೀಲೂ…

ಮತ್ತಷ್ಟು ನೀಲುವಿನ ಹಂಬಲಿಕೆಯಲಿ, ಹಿಂಬಾಲಿಕೆಯಲಿ ದಕ್ಕಿದ್ದು…

ವಿದ್ಯಾಶಂಕರ್ ಹರಪನಹಳ್ಳಿ

-೧-
ತುಂಡು ಬಟ್ಟೆಯುಟ್ಟು
ಚೋಟುದ್ದ ಹಾದಿಯ ನಡೆವ
ಹೆಣ್ಣುಗಳ ಸೌಂದರ್ಯಕೆ
ಆಹಾ! ಓಹೋ! ಎಂಬ ಗಾಂಪರು
ನಮ್ಮ ಹಳ್ಳಿಯ ಹೆಣ್ಣುಗಳು
ಕೆರೆಯಿಂದ ನೀರು ತರುವುದ,
ನೋಡಿಲ್ಲ ಎಂಬುದೇ ನನ್ನ ವಿಷಾದ!
-೨-
ಮೊನ್ನೆ ಬಸ್ಸಿನಲ್ಲಿ ಕೆಣಕಿದವಗೆ ಹೀಗೆಂದೆ…
ಅಣ್ಣನೋ ತಮ್ಮನೋ
ಪ್ರಿಯಸಖನೋ, ಆತ್ಮಬಂಧುವೊ
ಉತ್ತಮ ಸ್ನೇಹಿತನೋ
ಇನ್ನೇನೋ ಆಗಬಹುದಾದ ನೀನು…
ಕೈ ಹೊಸೆದುಕೊಳ್ಳುತ್ತಾ,
ಕಾಮುಕನಂತೆ ನಿಂತೆಯಲ್ಲೋ
ಕಪಿಯೇ …
-೩-
ಬರೆಯಲು, ಓದಲು ಬಾರದ
ನಮ್ಮ ಬೋರ
ತನ್ನ ದುಡಿಮೆಯಿ೦ದ
ಸಂಜೆಯ ಶರಾಬಿನಿಂದ
ಸುಖಿಸುವುದು
ಎಂತಹ ವಿಸ್ಮಯವಲ್ಲವೇ?
-೪-
ಮನಸಿನ ಚಂಚಲತೆ ಅರಿತಿದ್ದವ
‘ವೃದ್ಧನಾರಿ ಪತಿವ್ರತಾ’ ಎಂದ
ಸಹಜತೆ, ಮನಸಿನ ಚಂಚಲತೆ
ಸರಳತೆ ಒಪ್ಪಿಕೊಳ್ಳದ ಭಾರತ
ಕರ್ಮಠರ, ಕಪಟಿಗಳ ನಾಡಾಯಿತು…
-೫-
ಬಿಯರ್ ಕುಡಿದು
ಮಾಂಸ ಮೆದ್ದು
ಬ್ರಾಹ್ಮಣಿಕೆಯ ಬಿಟ್ಟೆ ಎಂದ
ಜ್ಞಾನಪೀಠಿಗಳ ಯಜಮಾನಿಕೆ
ನನ್ನನ್ನು ಹೊಸ ದುಗುಡಕ್ಕೆ ತಳ್ಳಿತು
-೬-
‘ನೀನೇ ನಾನು, ನಾನೇ ನೀನು’
ಎಂದು ಕ್ಯಾಸೆಟ್ ಕವಿಯಂತೆ ಮಾತಾಡಿ
ಮೆಚ್ಚಿಸಲು ಬಂದ ಹುಡುಗನಿಗೆ …
ನೀನು ನೀನಾಗಿರು ಮಾರಾಯ,
ನಾನು ಮಹಾ ಬೋರು…
ಎಂದ್ಹೇಳಿ ಸಾಗ್ಹಾಕಿದೆ…
ಹೆಣ್ಣಿನ ಕಷ್ಟ ನಿಮಗೆ ತಿಳಿದಿರಲಿ

‍ಲೇಖಕರು avadhi

26 April, 2013

8 Comments

  1. ಪ್ರಕಾಶ ಬಿ. ಜಾಲಹಳ್ಳಿ

    neelu kvitey salugalu chennagive

  2. pravara

    tumba chennagive

  3. laxmikant mirajakar

    oh!tumba arhaourn salugalu.chennagive.thanks.

  4. samyuktha

    sogasada salugalu…

  5. chalam

    ನಮ್ಮ ಹಳ್ಳಿಯ ಹೆಣ್ಣುಗಳು
    ಕೆರೆಯಿಂದ ನೀರು ತರುವುದ,
    ನೋಡಿಲ್ಲ ಎಂಬುದೇ ನನ್ನ ವಿಷಾದ!
    ತುಂಬಾ ಚೆಂದದ ಸಾಲುಗಳು.

  6. Rj

    Felt like Fried Cashew nuts (along with Vodka on the rocks!)
    😉
    -Rj

  7. Praveen Kumar Danagoudra

    cute Lines

  8. Kumudavalli Arun Murthy

    ಹಾಯ್ ಹಾಯ್ ಹಾಯ್ಕ 🙂
    ಮನಸಿನ ಚಂಚಲತೆ ಅರಿತಿದ್ದವ
    ‘ವೃದ್ಧನಾರಿ ಪತಿವ್ರತಾ’ ಎಂದ
    ಸಹಜತೆ, ಮನಸಿನ ಚಂಚಲತೆ
    ಸರಳತೆ ಒಪ್ಪಿಕೊಳ್ಳದ ಭಾರತ
    ಕರ್ಮಠರ, ಕಪಟಿಗಳ ನಾಡಾಯಿತು…
    …ಇಷ್ಟವಾಯ್ತು 🙂 ಎಲ್ಲವೂ ವಿಚಾರ ಮಾಡಬೇಕಾದಂತಹ ವಿಚಾರಗಳಿಂದ ತುಂಬಿವೆ 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading