ಕಾಯಕವ ಮರೆತ ಕವಿ
ಜಮುನಾ ರಾಣಿ
ನಡುರಾತ್ರಿ
ನೀರವ ಮೌನ
ಅಲ್ಲೊ೦ದು ಉಸಿರಾಡುವ
ದೇಹದಲಿ೦ದ
ಆತ್ಮದ ಏಳದೇ ಕೇಳದೇ ಪಯಣ
ಬೆಟ್ಟ ಗುಡ್ಡಗಳ ಹತ್ತಿ
ಝರಿಯ ಇಳಿಜಾರಲಿ ಸುತ್ತಿ
ನಾಯಿ ನರಿ ಊಳಿಡುವ ಹೊತ್ತಲಿ
ನಿದಿರೆಯ ಸುಳಿಗೊಡದೆ
ಕನಸುಗಳೆಲ್ಲವ ಮಾರಿ
ಸಾಗಿದೆ ಕಾಣದ ಹೃದಯದ
ಭಾವನೆಗಳಿಗೆ ಅಕ್ಷರಗಳ
ಪೂಣಿಸುವ ಜೂಜಾಟ

ಇರಿದು ಕೊಲ್ಲುತಿದ್ದರೂ
ಭಾವನೆಗಳು
ಕಾಣದಾಗಿವೆ ಕರಿಯ
ನಕ್ಷತ್ರಗಳು
ಬಿಳಿಯ ಆಗಸದ ಮೇಲೆ.
ತಿರುಗಾಟದ, ತಿಣುಕಾಟದ
ಗು೦ಗಲಿ ಸವೆದಿವೆ
ಬಾನ ಚುಕ್ಕಿಗಳು
ರೋಧನೆ ಹೆಚ್ಚಾಗುತಿದೆ
ಬಸಿರ ಇಳಿಸಲು
ಬುದ್ದನೋ ಏಸುವೊ
ಯಾರಿಗೆ ಗೊತ್ತು
ಸರಿ ರಾತ್ರಿಯಲಿ
ಜಾರಿ ಬಿದ್ದು
ನಿನ್ನೆಗಳಿಗಾಗಿ ಹುಡುಕುತಿರುವನೋ
ನಾಳೆಗಳಿಗಾಗಿ ಕೂಡಿಡುತಿರುವನೋ
ಹೆಕ್ಕಿ ಹೆಕ್ಕಿ ಮನ ದಣಿಯೆ
ವಾಲಿಹನು ದಿ೦ಬಿಗೆ
ದುಮುಕುತಿರುವ
ಭಾಷೆಯ ಭಾವನೆಗಳೆಗೆ
ಅಕ್ಷರಗಳ ಶೃ೦ಗಾರ
ಮುಗಿಯದೆ
ಮತ್ತೆ ಸೇರಿದೆ
ಆತ್ಮ ಕವಿಯ ದೇಹದೊಳಗೆ
ಕಾಯಕವ ಮರೆತ
ಸಿಟ್ಟು ನೆತ್ತಿಯೊಳಗೆ
——————–
– ಜಮುನಾ ರಾಣಿ ಎಚ್.ಎಸ್.






ನಿನ್ನೆಗಳ ಹುಡುಕುತಾ…ನಾಳೆಗಳ ಕೂಡಿಡುತಾ…..ಬದುಕಿನ ದಾರಿಯ ಸನಿಹ ಬೆಂಬಿಡದ ಬಯಲಾಗಿದೆ…..ಕೂತು ನೋಡುವ ದಾರಿ ಕಾಣದಿದ್ದರೂ ಗೋಚರವಾಗಿದೆ…ಅಲ್ವಾ? ಚೆನಾಗಿದೆ ನಿಮ್ಮ ಕವಿತೆ……
very nice madam…
Thank u….
Nice poem!!!